ಉಡುಪಿ:ಓಸ್ಕರ್ ಫರ್ನಾಂಡಿಸ್ ರವರ ಸ್ಮರಣಾರ್ಥ:ಸೆ.7ರಂದು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ.

ಉಡುಪಿ:ಓಸ್ಕರಣ್ಣನ ಕನಸಿನ ಮತ್ತು ನನಸಿನ ಉಡುಪಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರ ಆಶ್ರಯದಲ್ಲಿ
ಓಸ್ಕರ್ ಫರ್ನಾಂಡಿಸ್‌ರವರ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ದಿ.7.09.2025 ಭಾನುವಾರದಂದು ಕಾಂಗ್ರೆಸ್ ಭವನ, ನಾಯರಕೆರೆ ಬ್ರಹ್ಮಗಿರಿ, ಉಡುಪಿಯಲ್ಲಿ ಸಮಯ ಬೆಳಿಗ್ಗೆ 8:00 ಗಂಟೆಯಿಂದ ನೋಂದಣಿ ಆರಂಭವಾಗಲಿದೆ.

ಸ್ಪರ್ಧೆಗಳ ವಿವರ:
1ನೇ ತರಗತಿಯಿಂದ 4ನೇ ತರಗತಿ

  1. ಚಿತ್ರಕಲೆ (ಸ್ವಾತಂತ್ರ್ಯ ಹೋರಾಟಗಾರರು)

5ನೇ ತರಗತಿಯಿಂದ 7ನೇ ತರಗತಿ

  1. ಪ್ರಬಂಧ (ಭಾರತ ಸಂವಿಧಾನ)
  2. ಚಿತ್ರಕಲೆ (ಸ್ವಾತಂತ್ರ ಹೋರಾಟಗಾರರು)
  3. ದೇಶ ಭಕ್ತಿಗೀತೆ (ಸಮೂಹ)

8ನೇ ತರಗತಿಯಿಂದ 10ನೇ ತರಗತಿ

  1. ಕೊಲೆಜ್ ಆರ್ಟ್ (ರಾಜಕೀಯ)
  2. ಪ್ರಬಂಧ (ಭಾರತ ಸಂವಿಧಾನ)
  3. ದೇಶ ಭಕ್ತಿಗೀತೆ (ಸಮೂಹ)

ನಿಯಾಮವಳಿ :

  1. ಪ್ರತಿಯೊಂದು ಸ್ಪರ್ಧೆಗೆ ಗರಿಷ್ಠ ಮಿತಿ ಇರುವುದಿಲ್ಲ. ಎಷ್ಟು ವಿದ್ಯಾರ್ಥಿಗಳು ಬೇಕಾದರೂ ಭಾಗವಹಿಸಬಹುದು.
  2. ಭಾಗವಹಿಸುವ ವಿದ್ಯಾರ್ಥಿಗಳು ಶಾಲೆ ಮುಖ್ಯ ಅಧ್ಯಾಪಕರಿಂದ ಪತ್ರ ಅಥವಾ ಗುರುತುಪತ್ರ (ID)ತರತಕ್ಕದ್ದು.
  3. ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಗುವುದು.
  4. ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುವುದು.
  5. ಭಾಗವಹಿಸುವ ಎಲ್ಲರಿಗೂ ಉಪಹಾರ ಹಾಗೂ ಭೋಜನದ ವ್ಯವಸ್ಥೆ ಇರುತ್ತದೆ.
  6. ನಿರ್ಣಯಕರ ತೀರ್ಮಾನವೇ ಅಂತಿಮವಾಗಿರುತ್ತದೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 9901866998