ಉಡುಪಿ: ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಇದರ ಸಂಯುಕ್ತ ಆಶ್ರಯದಲ್ಲಿ ಸೆ.19ರಂದು ಅಜ್ಜರಕಾಡು ಇಲ್ಲಿ ನಡೆದ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು, ವಿದ್ಯಾ ನಗರದ ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗದ ಪಾರ್ಥ ಜೆ ಗೌಡ 100ಮೀ ಬ್ಯಾಕ್ ಸ್ಟ್ರೋಕ್ ವಿಭಾಗದಲ್ಲಿ ಪ್ರಥಮ ಹಾಗೂ 50ಮೀ. ಬ್ಯಾಕ್ ಸ್ಟ್ರೋಕ್ ವಿಭಾಗದಲ್ಲಿ ದ್ವೀತಿಯ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಪ್ರಥಮ ಪಿ.ಯು.ಸಿ ವಾಣಿಜ್ಯ ವಿಭಾಗದ ಪಾವನಿ ಬಿ ನಾಯಕ್ 100ಮೀ ಫ್ರೀಸ್ಟೈಲ್ ನಲ್ಲಿ ದ್ವೀತಿಯ ಸ್ಥಾನ ಗಳಿಸಿರುತ್ತಾರೆ.
ಹಾಗೂ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ.ಯ ಅಭಿಮಾನ್ ಶೆಟ್ಟಿ 50ಮೀ ಬ್ಯಾಕ್ಸ್ಟ್ರೋಕ್ ಮತ್ತು 50ಮೀ ಬ್ರೆಸ್ಟ್ಸ್ಟ್ರೋಕ್ಲ್ಲಿ ಪ್ರಥಮ, 100ಮೀ ಬಟರ್ ಫ್ಲೈಲ್ಲಿ ದ್ವೀತೀಯ ಸ್ಥಾನದೊಂದಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸೆಡ್ರಿಕ್ ಸೋನಿ 100ಮೀ ಬ್ಯಾಕ್ಸ್ಟ್ರೋಕ್ಲ್ಲಿ ದ್ವೀತೀಯ ಮತ್ತು 200ಮೀ ಬ್ರೆಸ್ಟ್ಸ್ಟ್ರೋಕ್ಲ್ಲಿ ತೃತೀಯ, ರೌನಕ್ ಮೋಹನ್ ಅಂಬೆರ್ಕರ್ 50ಮೀ ಫ್ರೀ ಸ್ಟೈಲ್ನಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ ಹಾಗೂ 4×100ಮೀ ರಿಲೇಯಲ್ಲಿ ಅಭಿಮಾನ್ ಶೆಟ್ಟಿ, ಸೆಡ್ರಿಕ್ ಸೋನಿ, ರೌನಕ್ ಮೋಹನ್ ಅಂಬೆರ್ಕರ್, ಸುಘೋಶ್ ಭಾರಧ್ವಾಜ್ ಇವರು ತೃತೀಯ ಸ್ಥಾನಿಗಳಾಗಿದ್ದಾರೆ.
ವಿಜೇತ ವಿದ್ಯಾರ್ಥಿಗಳನ್ನು ಅಜೆಕಾರು ಪದ್ಮ ಗೋಪಾಲ್ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿಯವರು, ಕಾಲೇಜಿನ ಪ್ರಾಂಶುಪಾಲರು ಮತ್ತು ಬೋಧಕ ಬೋಧಕೇತರ ವೃಂದದವರು ಅಭಿನಂದಿಸಿರುತ್ತಾರೆ.


















