ಉಡುಪಿ:ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಉಚಿತ ಆಯುರ್ವೇದ ಔಷಧ ವಿತರಣಾ ಕಾರ್ಯಕ್ರಮ

ಉಡುಪಿ:  ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ  ಬೆಂಗಳೂರಿನ ಉಪಾಧ್ಯ ಆಯುರ್ವೇದ ಹೆಲ್ತ್ ಕ್ಯಾರ್ ನವರು ಆಯೋಜಿಸಿದ್ದ ಉಚಿತ ಅರೋಗ್ಯ ತಪಾಸಣಾ ಶಿಬಿರ ಹಾಗೂ ಉಚಿತ ಆಯುರ್ವೇದ ಔಷಧ ವಿತರಣಾ ಕಾರ್ಯಕ್ರಮವನ್ನು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಉದ್ಘಾಟಿಸಿ ಹಿರಿಯ ಯತಿಗಳಾದ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹರಿಪಾದ ಸೇರಿದ್ದರೂ ನಮ್ಮೊಳಗೇ ಇದ್ದು ಇಂತಹ ಸಮಾಜಮುಖಿ ಕೆಲಸವನ್ನು ಮಾಡಲು ಅವರೇ ಸ್ಫೂರ್ತಿ,ಇಂದು ಸಾಯಂಕಾಲ ಅವರ ನುಡಿ ನಮನ ಇದೆ ವೇದಿಕೆಯಲ್ಲಿ ನಡೆಯಲಿರುವುದರಿಂದ ಅವರ ಆಶೀರ್ವಾದ ಸದಾ ನಮಗಿದೆ ಎಂದು ಅನುಗ್ರಹ ಸಂದೇಶ ನೀಡಿದರು.

ಡಾ.ಬಿ.ವಿ.ಶೇಷಾದ್ರಿ,ಡಾ.ಗೋಪಾಲಕೃಷ್ಣ,ಡಾ.ವಿಠಲ ಆಚಾರ್ಯ,ಡಾ.ಕಿಶನ್ ಜೆ.ಎನ್,ಡಾ.ಶ್ಯಾಮಸುಂದರ್ ಉಪಾಧ್ಯ, ಡಾ.ಕೃಷ್ಣರಾಜ ಭಟ್, ಡಾ.ಗೀತಾ ಹಂಗಾರಕಟ್ಟೆ,ಡಾ.ಸುವರ್ಷ,ಧನ್ವಂತರಿ ಚಿಕಿತ್ಸಾಲಯದ ವೈದ್ಯರುಗಳಾದ  ಡಾ.ನರಸಿಂಹ ಭಟ್,ಡಾ.ಸುಮನಾ ಪೈ  ಭಾಗವಹಿಸಿ ತಪಾಸಣೆ ನಡೆಸಿದರು.
ಪರ್ಯಾಯ ಮಠದ ಪಿ.ಆರ್.ಓ ಶ್ರೀಶ ಭಟ್ ಕಡೆಕಾರ್,ಚಿಣ್ಣರ ಸಂತರ್ಪಣೆಯ ಶ್ರೀನಿವಾಸ ರಾವ್ ಮೊದಲಾದವರು  ಉಪಸ್ಥಿತರಿದ್ದರು.