ಉಡುಪಿ: ಜ್ಯೋತಿ ವೈಂಡಿಂಗ್ ಅಂಗಡಿ ಮಾಲೀಕ ಗಣೇಶ್ ಪೈ ನಿಧನ

ಉಡುಪಿ: ಉಡುಪಿ ತೆಂಕಪೇಟೆಯ ಜ್ಯೋತಿ ವೈಂಡಿಂಗ್ ಅಂಗಡಿಯ ಮಾಲೀಕ ಗಣೇಶ್ ಪೈ (42) ಅವರು ಅಲ್ಪಕಾಲದ ಅಸೌಖ್ಯದಿಂದ ಬುಧವಾರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.ಬೀಡಿನಗುಡ್ಡೆಯ ಪಿಲಿಚಂಡಿ ಮಾರ್ಗದ ನಿವಾಸಿ ಗಣೇಶ್ ಪೈ ಅವರು ಕಳೆದ ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಮೃತರು ಪತ್ನಿ, ಓರ್ವ ಪುತ್ರಿ, ತಾಯಿ, ಸಹೋದರಿ ಹಾಗೂ ಸಹೋದರರನ್ನು ಅಗಲಿದ್ದಾರೆ