ಉಡುಪಿ: ನಗರದ ಮಿಷನ್ ಕಂಪೌಂಡ್ ಬಳಿ ಇರುವ ಸಿಟಿ ಗೇಟ್ ವೇ ಅಪಾರ್ಟ್ಮೆಂಟ್ ಕಟ್ಟಡ ಸಂಕೀರ್ಣ ಸಂಘದ ಮಹಾಸಭೆಯು ರವಿವಾರ ಕಟ್ಟಡದ ಸಭಾಗ್ರಹದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಇಕ್ಬಾಲ್ ಹಮ್ಮಾಜಿ ವಹಿಸಿದ್ದರು. ಸಂಘದ ಕಾರ್ಯದರ್ಶಿ ಪ್ರಮೀಳಾ ಜತ್ತನ್ನ ಮಹಾಸಭೆಯ ವರದಿ ಮಂಡಿಸಿದರು. ಬಳಿಕ ಸಂಘದ ಖಜಾಂಚಿ ರೇಷ್ಮಾ ತೋಟ ಆಯವ್ಯ ಯಗಳ ವರದಿಯನ್ನು ಮಂಡಿಸಿದರು.
ಈ ಸಂದರ್ಭದಲ್ಲಿ 2025 – 26 ನೇ ಸಾಲೀನ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಇಕ್ಬಾಲ್ ಹಮ್ಮಾಜಿ,ಕಾರ್ಯದರ್ಶಿಯಾಗಿ ಪ್ರಮೀಳಾ ಜತ್ತನ್ನ ಹಾಗೂ ಖಜಾಂಚಿ ಯಾಗಿ ರೇಷ್ಮಾ ತೋಟ ಆಯ್ಕೆಯಾದರು. ಸದಸ್ಯರಾಗಿ ಇಕ್ಬಾಲ್ ಶೈಖ್, ರೋಬಿನ್ ಡಿಸೌಜ, ಶಾಲಿನಿ ಅಮ್ಮನ್ನ, ಸಂಚಿತಾ ಮೇಸ್ತ, ವಿಜಯ್ ಜತ್ತನ್ನ, ವಿಜಯ್ ನಾಯಕ್ ಆಯ್ಕೆಯಾದರು.












