‘ದುಷ್ಟ ದಮನ’ ಕಿರು ಪ್ರಹಸನ ಪುಸ್ತಕ ಬಿಡುಗಡೆ

ಉಡುಪಿ, 16: ಗ್ರಂಥಪಾಲಕರಾದ ಹರಿಕೃಷ್ಣ ರಾವ್ ಎ. ಸಗ್ರಿ ಅವರು ಬರೆದಿರುವ, ‘ದುಷ್ಟ ದಮನ’ ಕಿರು ಪ್ರಹಸನ- ಪುಸ್ತಕದ ಬಿಡುಗಡೆಯು ಉಡುಪಿ ಸಂಸ್ಕ್ರತ ಕಾಲೇಜಿನ ವಾಚಾನಾಲಯದಲ್ಲಿ ಮಂಗಳವಾರ ನಡೆಯಿತು.
ಕೃತಿಯನ್ನು ಸಂಸ್ಕ್ರತ ಕಾಲೇಜಿನ ಪ್ರಾಚಾರ್ಯರಾದ ಡಾ. ಎನ್. ಲಕ್ಷ್ಮೀ ನಾರಾಯಣ ಭಟ್ ಅವರು ಬಿಡುಗಡೆಗೊಳಿಸಿದರು. ಲೇಖಕ ಹರಿಕೃಷ್ಣ ರಾವ್ ಎ. ಸಗ್ರಿ, ಯುವಸಾಹಿತಿ ತಾರಾನಾಥ್ ಮೇಸ್ತ ಶಿರೂರು, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.