ಆಟಿ ತಿಂಗಳ ಆಹಾರ ಔಷದೀಯ ಗುಣ ಹೊಂದಿದ್ದವು: ಸರಳಾ ‌ಕಾಂಚನ್

ಉಡುಪಿ: ಹಿಂದಿನ ಕಾಲದಲ್ಲಿ ಆಟಿ ತಿಂಗಳಲ್ಲಿ ಸೇವಿಸುತ್ತಿದ್ದ ಆಹಾರಗಳು ಔಷಧಿಯ ಗುಣಗಳನ್ನು ಹೊಂದಿದ್ದವು. ಆದರೆ ಇಂದು ನಮ್ಮ ಮಕ್ಕಳು ಫಾಸ್ಟ್‌ಫುಡ್‌ಗಳನ್ನು ತಿನ್ನುತ್ತ ಆಟಿ ಆಹಾರವನ್ನು ಮರೆತು ಬಿಡುತ್ತಿದ್ದಾರೆ. ಹೀಗಾಗಿ‌ ಆಟಿಯ ಆಹಾರಗಳ ಮಹತ್ವವನ್ನು ನಮ್ಮಮಕ್ಕಳಿಗೆ ತಿಳಿಸಿಕೊಡಬೇಕಾಗಿದೆ ಎಂದು ಕಾಂಗ್ರೆಸ್‌ ಹಿರಿಯ ನಾಯಕಿ ಸರಳಾ ಕಾಂಚನ್‌ ಹೇಳಿದರು.
ಉಡುಪಿ ಕಾಂಗ್ರೆಸ್‌ ಭವನದಲ್ಲಿ ಭಾನುವಾರ ಆಯೋಜಿಸಿದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲ ಬದಲಾದಂತೆ ಮನುಷ್ಯನ ಜೀವನ ಶೈಲಿಯೂ ಬದಲಾಗುತ್ತಿದೆ. ಆದರೆ ಪ್ರಕೃತಿಗೆ
ವಿರುದ್ಧವಾದ ಮನುಷ್ಯನ ಬದಲಾವಣೆ ಸಾಕಷ್ಟು ಪರಿಣಾಮವನ್ನು ಉಂಟು ಮಾಡುತ್ತಿದೆ ಎಂದರು.
ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು ಮಾತನಾಡಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಗೀತಾ ವಾಗ್ಲೆ ಮಾತನಾಡಿ, ಆಟಿಡೊಂಜಿ ದಿನದ
ಮಹತ್ವವನ್ನು ತಿಳಿಸಿದರು.
ಕಾಂಗ್ರೆಸ್‌ ಮುಖಂಡರಾದ ಭಾಸ್ಕರ್‌ ರಾವ್‌ ಕಿದಿಯೂರು, ಸರಸು ಡಿ. ಬಂಗೇರ, ಗೋಪಿ ಕೆ.
ನಾಯ್ಕ್‌, ಚಂದ್ರಿಕಾ ಕೇಲ್ಕರ್‌, ಸಂಧ್ಯಾ ಶೆಟ್ಟಿ ಹಿರಿಯಡಕ, ಪ್ರಭಾ ಶೆಟ್ಟಿ ಕಾಪು,
ವೆರೋನಿಕಾ ಕರ್ನೇಲಿಯೊ, ಪ್ರಫುಲ್ಲ, ರೋಶನಿ ಒಲಿವೆರಾ ಮೊದಲಾದವರು ಉಪಸ್ಥಿತರಿದ್ದರು.
ಚಂದ್ರಿಕಾ ಶೆಟ್ಟಿ ಸ್ವಾಗತಿಸಿದರು.
ಆಟಿಯ ವಿಶೇಷ ಖಾದ್ಯ:
ಮಿಡಿ ಉಪ್ಪಿನಕಾಯಿ, ಮಾನವಿನ ಕಾಯಿ ಚಟ್ನಿ, ತಿಮರೆ ಚಟ್ನಿ, ನುಗ್ಗೆ ಸೊಪ್ಪು ಬೋಳೆ
ಪಲ್ಯ, ನುಗ್ಗೆ ಸೊಪ್ಪು ಪಲ್ಯ, ಮಾವಿನ ಹಣ್ಣಿನ ಗೊಜ್ಜು, ತೇವು ತೇಟ್ಲದ ಪಲ್ಯ, ಸೌತೆ
ಮತ್ತು ಹೆಸರು ಕಾಳು ಗಸಿ, ನುಗ್ಗೆ ಸೊಪ್ಪು ವಡೆ, ಪತ್ರೊಡೆ, ಹಲಸಿನ ಹಣ್ಣಿನ ಮುಳ್ಕ,
ಹಲಸಿನ ಗಟ್ಟಿ, ಅತ್ರಾಸ, ಉಪ್ಪಡ್‌ ಪಚ್ಚಿರ್‌, ಗೆಂಡದಡ್ಡೆ, ಮೆಂತೆ ಗಂಜಿ ಹಾಗೂ
ಕುಡುತ ಲಡ್ಡು ಮೊದಲಾದ ಆಟಿಯ ಖಾದ್ಯಗಳನ್ನು ಪ್ರದರ್ಶಿಸಲಾಯಿತು.