ಉಡುಪಿ: ಉಡುಪಿ ಸಿವಿಲ್ ಇಂಜಿನಿಯರ್ ಅಸೋಸಿಯೇಷನ್ (ರಿ.) ಕಿದಿಯೂರು ಹೋಟೆಲಿನ ಅನಂತಶಯನ ಸಭಾಂಗಣದಲ್ಲಿ ಶನಿವಾರ ಎಂಜಿನಿಯರ್ ಮೀಟ್ ಜರಗಿತು.
ವೇದಿಕೆಯಲ್ಲಿ ಅತಿಥಿಗಳಾಗಿ ಸಿಂಟ ಆಸ್ಟ್ರೀಸ್ (SIMTA-ASTRIX) UPVC ವಿಂಡೋಸ್ ಕಂಪನಿಯ ರೀಜನಲ್ ಮ್ಯಾನೇಜರ್ ಮೋಹನ್, ಉಡುಪಿ ಅಲ್ಯೂಮಿನಿಯಂ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಸುರೇಶ್ ನಾಯ್ಕ್, ಸಿಂಟ ಆಸ್ಟ್ರೀಸ್ (SIMTA-ASTRIX) UPVC ವಿಂಡೋಸ್ ಕಂಪನಿಯ ಪ್ರಾಜೆಕ್ಟ್ ಹೆಡ್ ಸುನಿಲ್ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥರಿದ್ದರು. ಸಿಂಟ ಆಸ್ಟ್ರೀಸ್ (SIMTA-ASTRIX) UPVC ವಿಂಡೋಸ್, ಡೋರ್ಸ್ ಸಿಸ್ಟಮ್ಸ್ ಬಗ್ಗೆ ಆಧುನಿಕ ತಂತ್ರಜ್ಞಾನ ಕುರಿತು ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು.
ಮುಖ್ಯ ಅತಿಥಿ ಹಾಗೂ ಸಭೆಯ ಅಧ್ಯಕ್ಷತೆ ವಹಿಸಿದ ಉಡುಪಿ ಅಲ್ಯೂಮಿನಿಯಂ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಸುರೇಶ್ ನಾಯ್ಕ್ ರವರು ಧಾರ್ಮಿಕ, ಸಾಮಾಜಿಕ, ವ್ಯವಹಾರಿಕ ಕ್ಷೇತ್ರದಲ್ಲಿ ಕರ್ನಾಟದಲ್ಲಿಯೇ ಪ್ರಸಿದ್ಧ ಪಡೆದು ಅತೀ ದೊಡ್ಡ ವಿಶೇಷ ಸಾಧನೆಗೆ ಹಾಗೂ ವಿಶಿಷ್ಟ ಸೇವೆಯನ್ನು ಗುರುತಿಸಿ ಸಂಸ್ಥೆಯ ವತಿಯಿಂದ ಶಾಲು ಹೊದಿಸಿ, ಹೂಹಾರ-ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಗಣೇಶ್ ಬೈಲೂರು, ಭರತ್ ಭೂಷಣ, ಸಂಸ್ಥೆಯ ಅಧ್ಯಕ್ಷರಾದ ಕೆ. ರಂಜನ್ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಅನಂತೇಶ್ ಆಚಾರ್ಯ ವದನಾರ್ಪಣೆ ಗೈದರು. ಖಜಾಂಚಿ ಪಾಡಿಗಾರು ಲಕ್ಷ್ಮೀ ನಾರಾಯಣ ಉಪಧ್ಯಾಯ ಪ್ರಾರ್ಥನೆ ಮಾಡಿದರು. ಪಟ್ಟಾಭಿರಾಮ ನಿರೂಪಣೆ ಗೈದರು.












