ಉಡುಪಿ: ಬೆಳ್ಳಂಪಳ್ಳಿಯ ಭೂತರಾಜನ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಬಾವಿ ಪತ್ತೆ 

ಉಡುಪಿ: ಬೆಳ್ಳಂಪಳ್ಳಿಯ ಭೂತರಾಜನ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಬಾವಿಯೊಂದು ಪತ್ತೆಯಾಗಿದೆ. ಇಲ್ಲಿನ ಭೂತರಾಜನ ದೇವಸ್ಥಾನಕ್ಕೆ ಇಂದು ಬೆಳಿಗ್ಗೆ ಹೊಸದಾಗಿ ರಸ್ತೆಯನ್ನು ನಿರ್ಮಿಸವ ವೇಳೆ ರಸ್ತೆಯ ಮಧ್ಯೆ ಏಕಾಏಕಿಯಾಗಿ ಮಣ್ಣು ಕುಸಿದು, ಬಾವಿಯ ಆಕಾರದಲ್ಲಿ ಐದು ಅಡಿಕ್ಕಿಂತಲೂ ದೊಡ್ಡದಾದ ಗುಂಡಿ ಬಿದ್ದಿದೆ. ಅಚ್ಚರಿ ಎನ್ನುವಂತೆ ಈ ಗುಂಡಿಯಲ್ಲಿ ನೀರು ತುಂಬಿ ತುಳುಕುತ್ತಿದ್ದು, ಅಲ್ಲಿ ಇದ್ದ ಸ್ಥಳೀಯರು ಕುತೂಹಲದಿಂದ ಈ ಗುಂಡಿಯೊಳಗೆ ಕೋಲನ್ನು ಹಾಕಿ ಆಳವನ್ನು ನೋಡಿದ್ದಾರೆ. ಮಳೆಗೆ ಮಣ್ಣು ಕುಸಿದು ಗುಂಡಿ ನಿರ್ಮಾಣ ಆಗಿದೆ ಎನ್ನಲಾಗಿದ್ದರೂ, ಬಾವಿಯ ಆಕಾರದಲ್ಲಿ ಗುಂಡಿ ನಿರ್ಮಾಣ ಆಗಿರುವುದು ಬಹಳಷ್ಟು ಅಚ್ಚರಿಗೆ ಕಾರಣವಾಗಿದೆ.