ದಿ ಬಾರ್ಕೂರು ಎಜುಕೇಶನಲ್ ಸೊಸೈಟಿ (ರಿ) ಇದರ ಆಡಳಿತಕ್ಕೊಳಪಟ್ಟ, ನೇಶನಲ್ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸತತ 10 ವರ್ಷಗಳಿಂದ ನಡೆಸುತ್ತಿರುವ ಪ್ರತಿಷ್ಠಿತ ಕಂಪೆನಿಯಾದ ಟೊಯೋಟಾ ಕಿರ್ಲೋಸ್ಕರ್, ಮೋಟಾರ್ , ಪ್ರೈವೆಟ್ ಲಿಮಿಟೆಡ್ ಇವರಿಂದ ಅಪ್ರೆಂಟಿಶಿಪ್ ಕ್ಯಾಂಪಸ್ ಡ್ರೈವ್ ನಡೆಯಿತು.ಉಡುಪಿ ಜಿಲ್ಲೆಯ ಸರಕಾರಿ, ಅನುದಾನಿತ ಸಂಸ್ಥೆಗಳ ಎಂ.ಎಂ.ವಿ., ಇಲೆಕ್ಟ್ರೀಷಿಯನ್, ಇಲೆಕ್ಟ್ರಾನಿಕ್ಸ್, ಮೆಕ್ಯಾನಿಕ್, ಫಿಟ್ಟರ್, ವೆಲ್ಡರ್, ಎಂ.ಇ.ವಿ. ವಿದ್ಯಾರ್ಥಿಗಳು ಭಾಗವಹಿಸಿ ಪ್ರಯೋಜನವನ್ನು ಪಡೆದುಕೊಂಡರು.

ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕ ಶ್ರೀ ಬಿ. ರಾಮಚಂದ್ರ ಕಾಮತ್ ವಹಿಸಿದ್ದರು. ಸಂಸ್ಥೆಯ ಪ್ರಾಂಶುಪಾಲ ಶ್ರೀ ವೆಂಕಟೇಶ ಕ್ರಮಧಾರಿ ಸ್ವಾಗತಿಸಿದರು. ಟಿ.ಕೆ.ಎಂ.ನ ಮಾನವ ಸಂಪನ್ಮೂಲ ಅಧಿಕಾರಿ ಶ್ರೀ ದಿಲೀಪ್ ಕುಮಾರ್ ಮತ್ತು ಪ್ರೊಡಕ್ಷನ್ ವಿಭಾಗದ ಶ್ರೀ ಸುಭಾಸ್ಚಂದ್ರ ಇವರುಗಳು ಕಂಪನಿಯ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿದರು. ಶ್ರೀ ರೋಶನ್ (ಎಚ್ ಆರ್.). ಪ್ರೊಡಕ್ಷನ್ ವಿಭಾಗದ ಶ್ರೀ ಶ್ರೀಪತಿ ಪ್ರಭು, ಶ್ರೀ ಮಂಜೇಶ್ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಸ್ಥೆಯ ಹಿರಿಯ ಉಪನ್ಯಾಸಕ ಶ್ರೀ ಭಾಸ್ಕರ ಉಪಾದ್ಯಾರವರು ಧನ್ಯವಾದವಿತ್ತರು. ಸಿಬ್ಬಂದಿ ಶ್ರೀ ಹರೀಶ್ ಹೆಬ್ಬಾರ್, ಪಾರ್ಥನೆ ಮಾಡಿ, ಉಪನ್ಯಾಸಕ ಶ್ರೀ ಮಂಜುನಾಥ ನಾಯ್ಕ ಕಾರ್ಯಕ್ರಮವನ್ನು ನಿರೂಪಿಸಿದರು.

ಸಂಸ್ಥೆಯ ವತಿಯಿಂದ ಇನ್ನೂ ಹೆಚ್ಚಿನ ಕ್ಯಾಂಪಸ್ ಸೆಲೆಕ್ಷನ್ ನಡೆಸಲಿದ್ದು ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಪ್ರಾಂಶುಪಾಲರು ತಿಳಿಸಿದರು.






















