ಸಿಡಿಲು ಬಡಿದು ಮೃತಪಟ್ಟ ಗೌತಮ್ ಕುಟುಂಬಕ್ಕೆ ಪ್ರಾಕೃತಿಕ ವಿಕೋಪ ನಿಧಿಯಡಿ 5 ಲಕ್ಷ ರೂ. ಪರಿಹಾರ ಮೊತ್ತ ಮಂಜೂರು: ಶಾಸಕ ಕೆ. ರಘುಪತಿ ಭಟ್ ರಿಂದ ಕುಟುಂಬಕ್ಕೆ ವಿತರಣೆ

ಉಡುಪಿ: ಸಿಡಿಲು ಬಡಿದು ಮೃತಪಟ್ಟ ಕೊಡವೂರು ವಾರ್ಡ್ ನಿವಾಸಿ ಗೌತಮ್ ಕುಟುಂಬಕ್ಕೆ ಪ್ರಾಕೃತಿಕ ವಿಕೋಪ ನಿಧಿಯಡಿ ಮಂಜೂರಾದ 5 ಲಕ್ಷ ರೂ. ಮೊತ್ತದ ಚೆಕ್ ಅನ್ನು ಶಾಸಕ ಕೆ. ರಘುಪತಿ ಭಟ್ ಅವರು ಮೃತ ಗೌತಮ್ ಮನೆಗೆ ತೆರಳಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್, ಎಎಸ್ಪಿ ಜೈಶಂಕರ್, ಮಲ್ಪೆ ಪೊಲೀಸ್ ಠಾಣೆಯ ಉಪ ನಿರೀಕ್ಷಕ ತಿಮ್ಮೇಶ್ ಇದ್ದರು.