ಉದ್ಯಾವರ: ಬಿಜೆಪಿ ಯುವಮೋರ್ಚಾ ಕಾಪು ಮಂಡಲದಿಂದ ಗಗನ್ ಕೋಟ್ಯಾನ್ ಗೆ ಸನ್ಮಾನ

ಉಡುಪಿ: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 600ಕ್ಕೆ 600 ಅಂಕವನ್ನು ಗಳಿಸಿ ಅಸಮಾನ್ಯ ಸಾಧನೆಗೈದ ಉದ್ಯಾವರ ಪಿತ್ರೋಡಿಯ ಲೀಲಾದರ ಕೋಟ್ಯಾನ್ ಮತ್ತು ಶಶಿಕಲಾ ಅವರ ಸುಪುತ್ರ ಗಗನ್ ಕೋಟ್ಯಾನ್ ಅವರನ್ನು ಬಿಜೆಪಿ ಯುವಮೋರ್ಚಾ ಕಾಪು ಮಂಡಲದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ನಾಡಿನ ಖ್ಯಾತ ಸಾಹಿತಿ ಎಸ್ ಎಲ್ ಭೈರಪ್ಪನವರ “ಅನ್ವೇಷಣೆ” ಎಂಬ ಪುಸ್ತಕವನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್, ಉದ್ಯಾವರ ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಜೆ, ಕಾಪು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸಚಿನ್ ಸುವರ್ಣ ಪಿತ್ರೋಡಿ, ಕಾಪು ಮಂಡಲ ಕಾರ್ಯದರ್ಶಿ ರಾಜೇಶ್ ಕುಂದರ್, ಉದ್ಯಾವರ ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ರವಿ ಕೋಟ್ಯಾನ್, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಸಚಿನ್ ಬೊಳ್ಜೆ.

ಕಾರ್ಯದರ್ಶಿ ಸತೀಶ್ ಪೂಜಾರಿ, ಮಂಡಲ ಯುವಮೋರ್ಚಾ ಉಪಾಧ್ಯಕ್ಷ ಪ್ರಕಾಶ್ ಆಚಾರ್ಯ, ಕಾರ್ಯದರ್ಶಿಗಳಾದ ಸೋನು ಪಾಂಗಳ ವಿನೀಶ್ ಶೆಟ್ಟಿ, ಉದ್ಯಾವರ ಪಂಚಾಯತ್ ಸದಸ್ಯರುಗಳಾದ ರೇಖಾ ಪ್ರಮೀಳಾ ಮತ್ತು ಸ್ಥಳೀಯರಾದ ಪ್ರಶಾಂತ್ ಲೋಕೇಶ್ ಉಪಸ್ಥಿತರಿದ್ದರು.