ಉಡುಪಿ: ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ದಸರಾ ಮಹೋತ್ಸವದ ಪ್ರಯುಕ್ತ ಮುದ್ದು ಮಕ್ಕಳಿಂದ ಶ್ರೀ ಶಾರದಾ ದೇವಿಯ ಛದ್ಮವೇಷ ಸ್ಪರ್ಧೆಯು ಸೆ.26 ರಂದು ಶುಕ್ರವಾರ 10.30ಕ್ಕೆ ಸ್ಥಳ: ಶ್ರೀಮತಿ ಶಾಲಿನಿ ಡಾ| ಜಿ. ಶಂಕರ್ ಸಭಾಂಗಣ, ಉಚ್ಚಿಲ ಇಲ್ಲಿ ನಡೆಯಲಿದೆ.

ಸ್ಪರ್ಧಾ ನಿಯಮಗಳು:
- ಸ್ಪರ್ಧೆಯು 3 ವರ್ಷದಿಂದ 9 ವರ್ಷಗಳ ವಯೋಮಿತಿಯಲ್ಲಿ ನಡೆಯಲಿದೆ.
- ಸ್ಪರ್ಧಿಗಳು ಮೇಕಪ್, ವೇಷಭೂಷಣದೊಂದಿಗೆ ತಯಾರಾಗಿ ಬರತಕ್ಕದ್ದು.
- ಯಾವುದೇ ರೀತಿಯ ಸಂಭಾಷಣೆಗೆ ಅವಕಾಶವಿರುವುದಿಲ್ಲ. ಧ್ವನಿಮುದ್ರಿತ (recorded) ಹಿನ್ನಲೆ ಸಂಗೀತವನ್ನು ಉಪಯೋಗಿಸಬಹುದು.
- ಪ್ರತೀ ಸ್ಪರ್ಧಾಳುವಿಗೆ 2 ನಿಮಿಷದ ಕಾಲಾವಕಾಶ ನೀಡಲಾಗುವುದು.
- ಪ್ರತೀ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳೊಂದಿಗೆ ಫಲಕ ನೀಡಲಾಗುವುದು.
- ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೆ ನೆನಪಿನ ಕಾಣಿಕೆ ಹಾಗೂ ರೂ.1000 ಪ್ರೋತ್ಸಾಹಧನ ನೀಡಲಾಗುವುದು. (ವಿಜೇತರನ್ನು ಹೊರತುಪಡಿಸಿ)
- ವಯಸ್ಸಿನ ಧೃಡೀಕರಣಕ್ಕಾಗಿ ಸ್ಪರ್ಧಿಗಳು ಶಾಲಾ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹಾಜರುಪಡಿಸತಕ್ಕದ್ದು.
- ಸ್ಪರ್ಧಾಕಾಂಕ್ಷಿಗಳು 30 ನಿಮಿಷ ಮುಂಚಿತವಾಗಿ ಸ್ಪರ್ಧಾ ಸ್ಥಳದಲ್ಲಿ ಹಾಜರಿರತಕ್ಕದ್ದು.
- ಸಂಘಟಕರ ತೀರ್ಮಾನವೇ ಅಂತಿಮವಾಗಿರುತ್ತದೆ. ಯಾವುದೇ ಚರ್ಚೆಗೆ ಅವಕಾಶವಿರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
9663160938, 9731521979












