ಉಚ್ಚಿಲ ದಸರಾ ಮಹೋತ್ಸವ: ಸೆಪ್ಟೆಂಬರ್ 27ರಂದು ದಕ್ಷಿಣ ಮತ್ತು ಉಡುಪಿ ಜಿಲ್ಲಾ ಮಟ್ಟದ “ಚಿತ್ರ ಬಿಡಿಸುವ ಸ್ಪರ್ಧೆ”

ಉಡುಪಿ: ಮಹಾಲಕ್ಷ್ಮೀ ಕೋ ಓಪರೇಟಿವ್ ಬ್ಯಾಂಕ್ ಲಿ., ಉಡುಪಿ ಇದರ ಆಶ್ರಯದಲ್ಲಿ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಹಯೋಗದೊಂದಿಗೆ ಉಚ್ಚಿಲ ದಸರಾ ಮಹೋತ್ಸವದ ಅಂಗವಾಗಿ ದ.ಕ. ಮತ್ತು ಉಡುಪಿ ಜಿಲ್ಲಾ ಮಟ್ಟದ “ಚಿತ್ರ ಬಿಡಿಸುವ ಸ್ಪರ್ಧೆ” ಸೆ.27 ರಂದು ಬೆಳಗ್ಗೆ 9:30ಕ್ಕೆ ಮೊಗವೀರ ಭವನ ಉಚ್ಚಿಲದಲ್ಲಿ ನಡೆಯಲಿದೆ.

ವಿಷಯ: ನಾಡಹಬ್ಬ ದಸರಾ

ವಿಭಾಗ:

  • ಕಿರಿಯರ ವಿಭಾಗ
    1-4 ನೇ ತರಗತಿ
  • ಪ್ರಾಥಮಿಕ ವಿಭಾಗ
    5-7 ನೇ ತರಗತಿ
  • ಹೈಸ್ಕೂಲ್ ವಿಭಾಗ
    8-10 ನೇ ತರಗತಿ
  • ಕಾಲೇಜು ವಿಭಾಗ
    ಪದವಿ ಪೂರ್ವ – ಪದವಿ ತರಗತಿ
  • ಸಾರ್ವಜನಿಕ ವಿಭಾಗ
    ಮುಕ್ತ ಅವಕಾಶವಿದೆ.

ಸ್ಪರ್ಧಾ ನಿಯಮಗಳು:

  1. ಸ್ಪರ್ಧಾಳುಗಳಿಗೆ ಡ್ರಾಯಿಂಗ್ ಹಾಳೆಯನ್ನು ಸ್ಥಳದಲ್ಲಿಯೇ ನೀಡಲಾಗುವುದು.
  2. ಉಳಿದ ಪರಿಕರಗಳನ್ನು ಸ್ಪರ್ಧಾಳುಗಳೇ ತರತಕ್ಕದ್ದು.
  3. ಕಲಾಕೃತಿಗಳನ್ನು ಪೆನ್ಸಿಲ್ ಶೇಡಿಂಗ್, ಚಾರ್ಕೋಲ್, ಆಯಿಲ್ ಪೇಸ್ಟಲ್ಸ್ ಅಕ್ರಿಲಿಕ್ ಕಲರ್ಸ್, ಪೋಸ್ಟರ್ ಕಲರ್ಸ್ಟಳಿಂದ ರಚಿಸಬಹುದು.
  4. ತೈಲವರ್ಣಕ್ಕೆ ಅವಕಾಶವಿರುವುದಿಲ್ಲ.
  5. ಸ್ಪರ್ಧಾಳುಗಳು ಬೆಳಿಗ್ಗೆ 9.00ಕ್ಕೆ ಸಭಾಂಗಣದಲ್ಲಿ ಶಾಲಾ ದೃಢೀಕರಣ ಪತ್ರ ಅಥವಾ ID Card ದೊಂದಿಗೆ ಹಾಜರಿರತಕ್ಕದ್ದು.
  6. ಸ್ಪರ್ಧೆಗೆ 02 ಗಂಟೆಗಳ ಕಾಲಾವಕಾಶ ಮಾತ್ರ.
  7. ತೀರ್ಪುಗಾರರ ತೀರ್ಮಾನವೇ ಅಂತಿಮ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
www.mahalakshmicoopbank.com
Mobile: 9845016830, 9972120332