ಕಾಪುವಿನ ಸಮಾಜ ಸೇವಕರಿಗೆ ಜನಸೇವಾ ಸದ್ಭಾವನ ಪುರಸ್ಕಾರ್

ಗೋವಾ: ಇಂಡಿಯನ್ ಜರ್ನಲಿಸ್ಟ್ ಕಾಂಪೆಡಿಯಂ ದೆಹಲಿ ವತಿಯಿಂದ ಕಾಪುವಿನ ಇಬ್ಬರು ಸಮಾಜ ಸೇವಕರಿಗೆ ಜನಸೇವಾ ಸದ್ಭಾವನ ಪುರಸ್ಕಾರ್ ರಾಷ್ಟೀಯ ಪ್ರಶಸ್ತಿ ಪ್ರದಾನ

ಇಂಡಿಯನ್ ಜರ್ನಲಿಸ್ಟ್ ಕಾಂಪೆಡಿಯಂ ದೆಹಲಿ ವತಿಯಿಂದ ಏಪ್ರಿಲ್ 20 ರಂದು ಗೋವಾದ ಪಂಚತಾರ ಹೋಟೆಲ್ ವಿವಿಟಾ ತಾಜ್ ಸಭಾಂಗಣದಲ್ಲಿ ನಡೆಯಿತು.

ಐ.ಜೆ.ಸಿ ಹಾಗೂ ಇ.ಜೆ.ಎಸ್.ಐ ರಾಷ್ಟೀಯ ಸಮ್ಮೇಳನದಲ್ಲಿ ರಾಷ್ಟೀಯ ಮಟ್ಟದಲ್ಲಿ ಸಮಾಜ ಸೇವಕರಿಗೆ ಕೊಡಮಾಡುವ ಜನಸೇವಾ ಸದ್ಭಾವನ ಪುರಸ್ಕಾರ್ ರಾಷ್ಟೀಯ ಪ್ರಶಸ್ತಿಯನ್ನು ಜನಸಂಪರ್ಕ ಜನಸೇವಾ ವೇದಿಕೆ ಕಾಪು ಅಧ್ಯಕ್ಷರಾದ ದಿವಾಕರ ಬಿ ಶೆಟ್ಟಿ ಕಳತ್ತೂರು ಹಾಗೂ ಕಾಪು ಸಮಾಜ ಸೇವಾ ವೇದಿಕೆ ಅಧ್ಯಕ್ಷರಾದ ಮೊಹಮ್ಮದ್ ಫಾರೂಕ್ ಚಂದ್ರನಗರ ಇವರಿಗೆ ನೀಡಲಾಯಿತು. ಗೋವಾ ಬಿ.ಜೆ.ಪಿ ರಾಜ್ಯಾಧ್ಯಕ್ಷ ಹಾಗೂ ಗೋವಾ ಸರಕಾರದ ಎಕಾನಾಮಿ ಡೆವಲಪ್ಮೆಂಟ್ ನ ಅಧ್ಯಕ್ಷರಾದ ಸದಾನಂದ ಸೇಟ್ ತನವಾಡೆ ಪ್ರಶಸ್ತಿ ಪ್ರದಾನ ಮಾಡಿದರು.

ಉತ್ತರ ದೆಹಲಿ ಮಹಾನಗರ ಪಾಲಿಕೆಯ ಮೇಯರ್ ಜತ್ತೇದಾರ್ ಅವತಾರ್ ಸಿಂಗ್, ರಾಷ್ಟೀಯ ಸಿಖ್ ಸಂಘ ದೆಹಲಿಯ ಪ್ರದಾನ ಕಾರ್ಯದರ್ಶಿ ಮೋಹನ್ ಜಿತ್ ಕೌರ್ , ಗೋವಾ ಸಮಾಚಾರ, ಆಜ್ ತಕ್ ಮತ್ತು ಏನ್.ಡಿ.ಟಿವಿ ಪತ್ರಕರ್ತೆ ನಮಿತಾ ಶರಣ್ , ಗ್ವಾನ್ ಗೊಮ್ಸ್ ಅಂತಾರಾಷ್ಟ್ರೀಯ ಪ್ರೊಫೆಸರ್ ಇಂಗ್ಲಿಷ್ ಡಿವಿಷನ್ ಮಿಡ್ಲ್ ಲಿಸ್ಟ್ ತಾಂತ್ರಿಕ ಸಂಸ್ಥೆ ಗೋವಾ, ಡಾ. ಬಿಪಿನ್ ಭಟ್ರ (ಡಿ.ಜಿ) ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ ಕಂಟ್ರೋಲರ್ ಭಾರತ ಸರಕಾರ, ದೆಹಲಿ ಹೈಕೋರ್ಟ್ ನ್ಯಾಯವಾದಿ ಅನುಪಮ ಶರ್ಮ, ಅಭಯ್ ಶಂಕರ್ ಗೌಡು ರಾಷ್ಟೀಯ ಅಧ್ಯಕ್ಷ ಆಲ್ ಇಂಡಿಯಾ ಪ್ರಸಾರ ಭಾರತಿ ಡಿ. ಪಿ ನ್ಯೂಸ್ ಹಾಗೂ ಇಂಡಿಯನ್ ಜರ್ನಲಿಸ್ಟ್ ಕಾಂಪೆಡಿಯಂ ಅಧ್ಯಕ್ಷ ಗ್ಯಾನ್ ಪ್ರಕಾಶ್ ದೆಹಲಿ ಉಪಸ್ಥಿತರಿದ್ದರು.