ವಂಡ್ಸೆ ವನದುರ್ಗಾಪರಮೇಶ್ವರಿ ದೇವಳದ ಆವರಣದಲ್ಲಿ ವೃಕ್ಷಾಪರೋಹಣ ಕಾರ್ಯಕ್ರಮಕ್ಕೆ ಚಾಲನೆ

ಬೈಂದೂರು:  ಶ್ಯಾಮ್ ಪ್ರಸಾದ ಮುಖರ್ಜಿಯವರ ಬಲಿದಾನ ದಿವಸದ ಸ್ಮರಣೆ ಪ್ರಯುಕ್ತ ಜೂನ್ ೨೩ ರಿಂದ ಜುಲಾಯಿ ೬ ರ ವರೆಗೆ ನಡೆಯಲಿರುವ ವೃಕ್ಷಾಪರೋಹಣ ಕಾರ್ಯಕ್ರಮದ ಅಂಗವಾಗಿ ವಂಡ್ಸೆ ವನದುರ್ಗಾಪರಮೇಶ್ವರಿ (ಕಾನಮ್ಮ) ದೇವಸ್ಥಾನದ ವಠಾರದಲ್ಲಿ ಈ ಅಭಿಯಾನಕ್ಕೆ ಬೈಂದೂರು ಶಾಸಕ ಬಿ.ಎಮ್. ಸುಕುಮಾರ ಶೆಟ್ಟಿ ಅವರು ಗಿಡ ನೆಡುವ ಮೂಲಕ ಚಾಲನೆ ನೀಡಿದರು.

ಈ ಸಂಧರ್ಭದಲ್ಲಿ ದೇವಸ್ಥಾನ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ವಿ.ಕೆ. ಶಿವರಾಮ ಶೆಟ್ಟಿ, ವಂಡ್ಸೆ ಜಿಲ್ಲಾ ಪಂಚಾಯತ್ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಎನ್. ನಾಗರಾಜ ಶೆಟ್ಟಿ, ವಂಡ್ಸೆ ಪಂಚಾಯತ್ ಶಕ್ತಿ ಕೇಂದ್ರ ಅಧ್ಯಕ್ಷ ದೀಪಕ್ ಕುಮಾರ ಶೆಟ್ಟಿ, ವಂಡ್ಸೆ ಗ್ರಾ. ಪಂ. ಸದಸ್ಯ ಪ್ರಶಾಂತ ಪೂಜಾರಿ, ವೆಂಕಟೇಶ ಶೆಟ್ಟಿ ತೆಂಕೊಡಿಗೆ ,ರಾಜು ಸೀತಾ ಗೀತಾ, ನಿತಿನ್ ಶೆಟ್ಟಿ ವಾಲೀಕೆರೆ ಆತ್ರಾಡಿ, ಹನೀಪ್ ಸಾಹೇಬ್ ವಂಡ್ಸೆ , ರಜತ ಶೆಟ್ಟಿ ಕಟ್ಟೆಮನೆ, ಪ್ರಭಾಕರ ಶೆಟ್ಟಿ ವಂಡ್ಸೆ ಕಟ್ಟೆಮನೆ, ಸುಧಾಕರ ಪೂಜಾರಿ ಇವರು ಸಹಕರಿಸಿದರು.

ಚಿತ್ರ ಮತ್ತು ವರದಿ : ರಕ್ಷಿತ ಕುಮಾರ ವಂಡ್ಸೆ.