ಕಾನೂನಿನಡಿಲ್ಲಿ “ಡೀಮ್ಡ್ ಫಾರೆಸ್ಟ್” ಎಂಬ ಪರಿಕಲ್ಪನೆ ಇಲ್ಲ: ಕರ್ನಾಟಕ ಹೈ ಕೋರ್ಟ್ ಪುನರುಚ್ಛಾರ

ಬೆಂಗಳೂರು: ಕಾನೂನಿನಡಿಲ್ಲಿ “ಡೀಮ್ಡ್ ಫಾರೆಸ್ಟ್” ಎಂಬ ಪರಿಕಲ್ಪನೆ ಇಲ್ಲ ಎನ್ನುವುದನ್ನು ಪುನರುಚ್ಚರಿಸುತ್ತಾ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆಗೆ ಪರವಾನಗಿ ಕೋರಿ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸುವಂತೆ ಕರ್ನಾಟಕ ಹೈಕೋರ್ಟ್ ಅಧಿಕಾರಿಗಳಿಗೆ ಸೂಚಿಸಿದೆ. ಅರೆನೂರು ಗ್ರಾಮದ ನಿವಾಸಿ ಡಿಎಂ ದೇವೇಗೌಡ ಅವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ನೇತೃತ್ವದ ಪೀಠವು ಜೂನ್ 12, 2019 ರಂದೇ ಈ ತೀರ್ಪನ್ನು ತೆರವುಗೊಳಿಸಲಾಗಿದೆ ಎಂದು ಸೂಚಿಸಿತು.

ಭೂಮಿ ಒಂದೋ “ಅರಣ್ಯ” ವಾಗಿರಬೇಕು ಅಥವಾ ಅದು “ಅರಣ್ಯ ಭೂಮಿ” ಯಾಗಿರಬೇಕು, ಆದರೆ ಕಾಯಿದೆಯಡಿ ಯಾವುದೇ ನಿಬಂಧನೆ ಇಲ್ಲದಿದ್ದಲ್ಲಿ ಯಾವುದೇ ಭೂಮಿಯನ್ನು “ಡೀಮ್ಡ್ ಫಾರೆಸ್ಟ್” ಎನ್ನುವಂತಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ದೇವೇಗೌಡರ ಅರ್ಜಿಯನ್ನು ಎರಡು ತಿಂಗಳೊಳಗೆ ಹೊಸದಾಗಿ ಪರಿಗಣಿಸುವಂತೆ ನಿರ್ದೇಶಿಸಿದ ಪೀಠ, ಟಿಎನ್ ಗೋದಾವರ್ಮನ್ ತಿರುಮುಲ್ಕಪಾಡ್ ವರ್ಸಸ್ ಯೂನಿಯನ್ ಗವರ್ನಮೆಂಟ್ ಆಫ್ ಇಂಡಿಯಾ ಮತ್ತು ಇತರ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪಿನಲ್ಲಿ ಸೂಚಿಸಿದಂತೆ ಸಂಬಂಧಿತ ಭೂಮಿ “ಅರಣ್ಯ” ಅಥವಾ “ಅರಣ್ಯ ಭೂಮಿ” ಎಂಬುದನ್ನು ಸಂಬಂಧಪಟ್ಟ ಪ್ರಾಧಿಕಾರವು ಪರಿಗಣಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿತು.

ಭೂಮಿ “ಅರಣ್ಯ” ವೋ ಅಥವಾ “ಅರಣ್ಯ ಭೂಮಿ” ಯೋ ಎಂದು ಸಂಬಂಧಿಸಿದ ಪ್ರಾಧಿಕಾರವು ಗಮನಿಸಬೇಕಾದ ಅಗತ್ಯವಿಲ್ಲ, ಅರಣ್ಯ (ಸಂರಕ್ಷಣೆ) ಕಾಯಿದೆ, 1980 ರ ಸೆಕ್ಷನ್ 2 ರ ಪ್ರಕಾರ ಕೇಂದ್ರ ಸರ್ಕಾರದ ಒಪ್ಪಿಗೆಯನ್ನು ಪಡೆಯದ ಹೊರತು ಹೊಸ ಗುತ್ತಿಗೆ ಅಥವಾ ಗುತ್ತಿಗೆಯ ವಿಸ್ತರಣೆಯನ್ನು ನೀಡಲಾಗುವುದಿಲ್ಲ . ಹಾಗೆ ತೆಗೆದುಕೊಂಡ ನಿರ್ಧಾರವನ್ನು ಅರ್ಜಿದಾರರಿಗೆ ತಿಳಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ