ರೆಂಜಾಳ ಮಹಾಲಕ್ಷ್ಮಿನಗರದಲ್ಲಿ ತುಳುಲಿಪಿ ನಾಮಫಲಕದ ಉದ್ಘಾಟನೆ

ಕಾರ್ಕಳ: ಪಂಚದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಲಿಪಿ ಅಳಿವಿನಂಚಿನಲ್ಲಿದ್ದು, ಅದನ್ನು ಬೆಳೆಸಿ ಪೋಷಿಸುವುದು ತುಳುವರ ಜವಾಬ್ದಾರಿಯಾಗಿದೆ. ತುಳುವಿಗೆ ತನ್ನದೇ ಆದ ಇತಿಹಾಸವಿದ್ದು ದೇಶದ ಸಂಸ್ಕೃತಿಗೆ ಅಪಾರ ಕೊಡುಗೆಯನ್ನು ನೀಡಿದೆ ಎಂದು ಮಲ್ಲಿಕಾ ಮುನಿರಾಜ್ ಜೈನ್ ಹೇಳಿದರು.

ರೆಂಜಾಳ ಮಹಾಲಕ್ಷ್ಮಿ ನಗರದಲ್ಲಿ ಅಳವಡಿಸಿರುವ ತುಳುಲಿಪಿ ನಾಮ ಫಲಕವನ್ನು ಉದ್ಘಾಟಿಸಿ ಮಾತನಾಡಿದರು. ರೆಂಜಾಳದ ತುಲು ಬಾಂಧವರಿಗೆ ತುಲು ಲಿಪಿ‌ಕಲಿಕೆಗೆ ಅನುಕೂಲವಾಗುಂತೆ ತುಲುಲಿಪಿ ತರಗತಿಯನ್ನು ಆರಂಭಿಸಲಾಗುವುದು. ತುಳುನಾಡಿನಲ್ಲಿ ಹೆಣ್ಣಿಗೆ ಹೆಚ್ಚಿನ ಮಹತ್ವದ ಸ್ಥಾನ ನೀಡಲಾಗಿದ್ದು ತುಳು ಬೆಳೆಸುವುದು ನಮ್ಮ ಕರ್ತವ್ಯ ಎಂದರು.

ಈ ಕಾರ್ಯಕ್ರಮದಲ್ಲಿ ರೆಂಜಾಳ ಪಂಚಾಯತ್ ಅಧ್ಯಕ್ಷೆ ದೀಪಿಕಾ ಶೆಟ್ಟಿ, ಪಂಚಾಯತ್ ಸದಸ್ಯರಾದ ರಮೇಶ್ ಶೆಟ್ಟಿ ಮಂಟೊಟ್ಟು, ಜೈ ತುಳುನಾಡು ಸಂಘಟನೆಯ ಪ್ರಮುಖರಾದ ವಿಶು, ಶ್ರೀಕೇರ, ಶೇಖರ್ ಶ್ರೀಗಂಗೆ, ಸದಸ್ಯರಾದ ಪವನ್ ಕರ್ಕೇರ, ಪ್ರಶಾಂತ್ ಆಚಾರ್ಯ, ಗ್ರಾಮಸ್ಥರಾದ ದೀಕ್ಷಿತ್ ಶೆಟ್ಟಿ, ಚೇತನ್ ಶೆಟ್ಟಿ, ಕುಮಾರಿ ಶಾಂತಿ ಗೌಡ ,ಪ್ರವೀಣ್ ಶೆಟ್ಟಿ,ರಮೇಶ್ ಶೆಟ್ಟಿ,ರಾಜೇಶ್ ಶೆಟ್ಟಿ, ಉದಯ್ ಶೆಟ್ಟಿ, ಸಂತೋಷ್ ಮೊದಲಾದವರು ಪಾಲ್ಗೊಂಡಿದ್ದರು.