‘ಟೀಮ್ ಸಹರಾ ಉಡುಪಿ’ ಸಂಘಟನೆಯಿಂದ ಬಡಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ

ಉಡುಪಿ: ಕೋವಿಡ್ ಲಾಕ್ ಡೌನ್ ನಿಂದ ಸಂಕಷ್ಟಕ್ಕೀಡಾಗಿರುವ ತೀರಾ ಬಡ
ಕುಟುಂಬಗಳಿಗೆ ‘ಟೀಮ್ ಸಹರಾ ಉಡುಪಿ’ ಸಂಘಟನೆಯು ದಿನಸಿ ಕಿಟ್ ವಿತರಿಸುವ ಮೂಲಕ ನೆರವಿನ ಹಸ್ತ ಚಾಚಿದೆ.

ವಿದ್ಯಾರ್ಥಿಗಳೇ ಸೇರಿಕೊಂಡು ಕಟ್ಟಿರುವ ಟೀಮ್ ಸಹರಾ ಕಳೆದ ಹಲವಾರು ವರ್ಷಗಳಿಂದ ಸಾಕಷ್ಟು ಸಾಮಾಜಿಕ ಕಾರ್ಯಕ್ರಮಗಳನ್ನು‌ ನಡೆಸಿಕೊಂಡು ಬಂದಿದೆ. ಇದೀಗ ಲಾಕ್ ಡೌನ್ ಲ್ಲಿ ಕಳೆದ ಐದು ದಿನಗಳಲ್ಲಿ ಸುಮಾರು 25 ಅಧಿಕ‌ ಬಡಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ ಮಾಡುವ ಸಾಮಾಜಿಕ ಬದ್ಧತೆಯನ್ನು ಮೆರೆದಿದೆ.

ಲಾಕ್ ಡೌನ್ ಮುಗಿಯುವವರೆಗೂ ಈ ಸೇವಾಕಾರ್ಯವನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ತಮ್ಮ ಕೈಯಲ್ಲಾದ ಸಹಾಯ ಮಾಡುತ್ತಿದ್ದೇವೆ. ಅಗತ್ಯ ಬಿದ್ದರೆ ದಾನಿಗಳ ನೆರವು ಪಡೆದು ಕಿಟ್ ವಿತರಣೆ ಕಾರ್ಯ ಮಾಡುತ್ತೇವೆ ಎಂದು ಟೀಮ್ ಸಹರಾ ಅಧ್ಯಕ್ಷ ಪ್ರಥಮ್ ಪೂಜಾರಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಆದಿತ್ಯ ಶೆಟ್ಟಿ, ಸದಸ್ಯರಾದ ಯಶ್, ಅಂಕಿತ್, ಲೆಸ್ಟರ್, ಕಾರ್ತಿಕ್, ಧನುಷ್ ಬಿ.ಕೆ. ಮೊದಲಾದವರು ಉಪಸ್ಥಿತರಿದ್ದರು.