ಕೊಡವೂರು ದಿವ್ಯಾಂಗ ರಕ್ಷಣಾ ಸಮಿತಿ ವತಿಯಿಂದ ದಿವ್ಯಾಂಗರಿಗೆ ಸಹಾಯ; ದಕ್ಷರಿಗೆ ಸನ್ಮಾನ

ಉಡುಪಿ: ವಿಶ್ವ ಅಂಗವಿಕಲರ ದಿನಾಚರಣೆ ಪ್ರಯುಕ್ತ ದಿವ್ಯಾಂಗರಿಗೆ ಸಹಾಯ ಹಾಗೂ ದಕ್ಷ ಪೋಲೀಸ್ ಅಧಿಕಾರಿಯವರಿಗೆ ಸನ್ಮಾನ ಕಾರ್ಯಕ್ರಮವು ಡಿ.4 ಭಾನುವಾರದಂದು “ಕೊಡವೂರು ದಿವ್ಯಾಂಗ ರಕ್ಷಣಾ ಸಮಿತಿ”, “ಮಠದಬೆಟ್ಟು ಯುವಕ ಮಂಡಲ ಮಠದಬೆಟ್ಟು” ಮತ್ತು “ಬೆಲ್—ಓ—ಸೀಲ್ ಮಜ್ಧೂರ್ ಸಂಘ ಸಂತೆಕಟ್ಟೆ” ಇವರ ಜಂಟಿ ಆಶ್ರಯದಲ್ಲಿ ಬ್ರಹ್ಮರ್ಷಿ ಶ್ರೀ ನಾರಾಯಣಗುರು ಮಂದಿರ ಬನ್ನಂಜೆ ಇಲ್ಲಿ ವಿಶಿಷ್ಟವಾಗಿ ಜರುಗಿತು. ಈ ಸಂದರ್ಭದಲ್ಲಿ ಬೆನ್ನುಮೂಳೆ ಮುರಿತಕ್ಕೊಳಗಾಗಿ ದುಡಿಯಲು ಸಾಧ್ಯವಿಲ್ಲದಂತಹ ಬಡವರು, ಹಾಗೂ ದುರ್ಬಲರು ಹಾಗೂ ಅಶಕ್ತರನ್ನು ಗುರುತಿಸಿ, ಅಂತಹವರಿಗೆ ಅಕ್ಕಿ ಹಾಗೂ ಔಷಧಗಳನ್ನು […]