‘ಪ್ರತ್ಯೇಕ ತುಳುರಾಜ್ಯಕ್ಕಾಗಿ ನಾವು ಬ್ಲಾಸ್ಟ್ ಮಾಡಬೇಕು’: ಆಡಿಯೋ ವೈರಲ್

ಮಂಗಳೂರು: ‘ಪ್ರತ್ಯೇಕ ತುಳು ರಾಜ್ಯದ ಹೋರಾಟಕ್ಕಾಗಿ ನಾವು ಬ್ಲಾಸ್ಟ್ ಮಾಡಬೇಕು’ (ತುಳು ರಾಜ್ಯಗಾದ್ ನಮ ಒಂಜಿ ಬ್ಲಾಸ್ಟ್ ಮಲ್ಪೊಡು ) ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್ಸಾರ್ ಹೇಳಿದ್ದಾರೆ ಎನ್ನಲಾದ ಆಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಪ್ರತ್ಯೇಕ ತುಳು ರಾಜ್ಯಕ್ಕಾಗಿ ಎಲ್ಲೆಡೆ ಹೋರಾಟ ಆಗಬೇಕು. ಇದಕ್ಕಾಗಿ ದೊಡ್ಡ ಮಟ್ಟದಲ್ಲಿ ‘ಬ್ಲಾಸ್ಟ್’ ಮಾಡಬೇಕು. ಟಯರ್ಗಳಿಗೆ ಬೆಂಕಿ ಹಚ್ಚಬೇಕು. ಆಗ ಸರ್ಕಾರ ನಮ್ಮನ್ನು ಸಂಧಾನಕ್ಕೆ ಕರೆಸುತ್ತದೆ. ಅಲ್ಲಿ, ತುಳುವನ್ನು ಅಧಿಕೃತ […]