ಬ್ಯಾಂಕ್ ಆಫ್ ಬರೋಡಾ 115 ನೇ ಸ್ಥಾಪನಾ ದಿನಾಚರಣೆ

ಉಡುಪಿ: ಬ್ಯಾಂಕ್ ಅಪ್ ಬರೋಡ ಅತ್ರಾಡಿ ಶಾಖೆಯಲ್ಲಿ ಬ್ಯಾಂಕಿನ 115 ನೇ ಸ್ಥಾಪನಾ ದಿನಾಚರಣೆಯನ್ನು ಬ್ಯಾಂಕಿನ ಹಿರಿಯ ಗ್ರಾಹಕ ಸತ್ಯಾನಂದ ನಾಯಕ್ ರವರು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿ ಬ್ಯಾಂಕಿನ ಸ್ಥಾಪಕರಾದ ಮಹಾರಾಜ್ ಸಯಾಜಿ ರಾವ್ ಗಾಯಕ್ವಡ್ ರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಗೈದರು. ನಂತರ ಮಾತನಾಡುತ್ತಾ, 1973 ರಲ್ಲಿ ಅತ್ರಾಡಿಯಲ್ಲಿ ವಿಜಯ ಬ್ಯಾಂಕ್ ಶಾಖೆ ಉದ್ಘಾಟನೆ ಅದ ಸಂದರ್ಭದ ದಿನಗಳು, 1969 ರಲ್ಲಿ ಬ್ಯಾಂಕ್ ರಾಷ್ಟೀಕರಣ, 2020 ರಲ್ಲಿ ಬ್ಯಾಂಕ್ ಆಫ್ ಬರೋಡದೊಂದಿಗೆ ದೇನಾ […]
ಕಾರು ಮರಕ್ಕೆ ಢಿಕ್ಕಿ : ನಿವೃತ್ತ ಬ್ಯಾಂಕ್ ನೌಕರ ಸಾವು

ಕುಂದಾಪುರ: ಕಾರೊಂದು ಮರಕ್ಕೆ ಡಿಕ್ಕಿಹೊಡೆದ ಪರಿಣಾಮ ಚಾಲಕ ಸಾವನ್ನಪ್ಪಿದ ದಾರುಣ ಘಟನೆ ಕೋಟೇಶ್ವರ – ಹಾಲಾಡಿ ರಸ್ತೆಯ ಕಾಳಾವರ ಗ್ರಾಮದ ಸಳ್ವಾಡಿ ನಡುಬೆಟ್ಟು ಕ್ರಾಸ್ಬಳಿ ಗುರುವಾರ ಸಂಭವಿಸಿದೆ. ಮೊಳಹಳ್ಳಿ ಗ್ರಾಮದ ಕುಂದ್ರಾಡಿ ನಿವಾಸಿ ವಿಜಯ ಬ್ಯಾಂಕ್ ನಿವೃತ್ತ ನೌಕರ ಶಂಕರ ಶೆಟ್ಟಿ(೬೩) ಸಾವನ್ನಪ್ಪಿದವರು. ಶಂಕರ್ ಶೆಟ್ಟಿ ತಮ್ಮ ಪತ್ನಿ ಹಾಗೂ ಇಬ್ಬರು ಸಂಬಂಧಿಕರೊಂದಿಗೆ ಸ್ಯಾಂಟ್ರೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಎದುರಿನಿಂದ ಬರುತ್ತಿದ್ದ ಬೈಕಿಗೆ ಢಿಕ್ಕಿಯಾಗುವುದನ್ನು ತಪ್ಪಿಸುವ ಭರದಲ್ಲಿ ಕಾರು ಮರಕ್ಕೆ ಢಿಕ್ಕಿಯಾಗಿದೆ.ಢಿಕ್ಕಿಯ ರಭಸಕ್ಕೆ […]