ಸರ್ಕಾರದ ಖರ್ಚಿನಲ್ಲಿ ಬಿಜೆಪಿ ಪ್ರಚಾರದ ಸಭೆ ಖಂಡನೀಯ – ವೆರೋನಿಕಾ ಕರ್ನೆಲಿಯೊ

ಕಟಪಾಡಿಯಲ್ಲಿ ಶುಕ್ರವಾರ ನಡೆದ ಸವಲತ್ತು ವಿತರಣೆ ಕಾರ್ಯಕ್ರಮ ಸರಕಾರಿ ಖರ್ಚಿನಲ್ಲಿ ಬಿಜೆಪಿ ಪ್ರಚಾರದ ಸಭೆಯಾಗಿತ್ತು ಎಂಬ ಕೂಗು ಎಲ್ಲಾ ಕಡೆಗಳಿಂದ ಕೇಳಿಬರುತ್ತಿದೆ ಎಂದು ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೆಲಿಯೋ ತಿಳಿಸಿದ್ದಾರೆ. ಜನರ ತೆರಿಗೆಯ ಹಣದಲ್ಲಿ ಒಂದು ಕೋಟಿ ವೆಚ್ಚದಲ್ಲಿ ಎಲ್ಲಾ ಸರಕಾರಿ ಅಧಿಕಾರಿಗಳನ್ನು ಬಳಸಿ ಟಾರ್ಗೆಟ್ ಕೊಟ್ಟು ಜನ ಸೇರಿಸಿರುವುದು ಬಿಜೆಪಿಯ ದಿವಾಳಿತನ ತೋರಿಸುತ್ತದೆ. ಪ್ರತಿ ಪಂಚಾಯತಿಗೆ 2 ಬಸ್ಸು ಕಳುಹಿಸಿ 200 ಜನ ತರಬೇಕು ಎನ್ನುವ ಮೇಲಾಧಿಕಾರಿಗಳ ಮೌಖಿಕ ಆದೇಶ ಜನರಿಗೆ ತಪ್ಪು ಮಾಹಿತಿ ನೀಡಿ, […]