ಯುಪಿಸಿಎಲ್ ಕಾರ್ಮಿಕ ಶೆಡ್ನಲ್ಲಿ ನಡೆದ ಶರಣಪ್ಪ ಕೊಲೆ ಆರೋಪಿಗೆ ಜೀವಾವಧಿ

ಉಡುಪಿ: ಕಳೆದ ಆರು ವರ್ಷಗಳ ಹಿಂದೆ ಯುಪಿಸಿಎಲ್‌ನ ಕಾರ್ಮಿಕರ ಶೆಡ್‌ನಲ್ಲಿ ನಡೆದ ಶರಣಪ್ಪ ಕೊಲೆ ಪ್ರಕರಣದ ಆರೋಪಿಗೆ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಬಸಪ್ಪ ದುರ್ಗಪ್ಪ ಯಾನೆ ಬಸು (45) ಶಿಕ್ಷೆಗೆ ಗುರಿಯಾದ ಆರೋಪಿ. ಯುಪಿಸಿಎಲ್‌ನ ಸೋಜಾ ಕನ್‌ಸ್ಟ್ರಕ್ಷನ್‌ ಗುತ್ತಿಗೆ ಸಂಸ್ಥೆಯಲ್ಲಿ ಆರೋಪಿ ಬಸಪ್ಪ ದುರ್ಗಪ್ಪ ತಾತ್ಕಾಲಿಕವಾಗಿ ಗುತ್ತಿಗೆ ಕೆಲಸ ಮಾಡುತ್ತಿದ್ದ. ಈ ವೇಳೆ ಶರಣಪ್ಪ ಎಂಬಾತನು ಬಸಪ್ಪನಿಂದ 500ರೂ. ಸಾಲ ಪಡೆದುಕೊಂಡಿದ್ದನು. ಸಾಲದ ಮರುಪಾವತಿ […]