ಫೆ.23 ಕಾರ್ಕಳದಲ್ಲಿ ಈಶ್ವರೀಯ ವಿಶ್ವ ವಿದ್ಯಾಲಯದಿಂದ ಶಿವರಾತ್ರಿ ಹಬ್ಬದ ಆದ್ಯಾತ್ಮಿಕ ಕಾರ್ಯಕ್ರಮ

ಕಾರ್ಕಳ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಆಶ್ರಯದಲ್ಲಿ ಶಿವರಾತ್ರಿ ಹಬ್ಬದ ಆದ್ಯಾತ್ಮಿಕ ಕಾರ್ಯಕ್ರಮವು ಆನೆಕೆರೆಯ ಸದ್ಯೋಜಾತ ಉದ್ಯಾನವನದಲ್ಲಿ 23ರಂದು ಸಂಜೆ 4 ರಿಂದ ಜರಗಲಿದೆ. ಶಾಲಾ ಮಕ್ಕಳು ಹಾಗೂ ಸಾರ್ವಜನಿಕರ ಭಕ್ತಿ ಗೀತೆ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಂತರ ವಿದ್ವಾನ್ ರಾಧಕೃಷ್ಣ ನಾವಡರವರ ಶ್ರೀ ನಾಟ್ಯಲಯ ಕಾರ್ಕಳ ಇವರಿಂದ ನೃತ್ಯ ಸಂಜೆ ಭರತನಾಟ್ಯ ಕಾರ್ಯಕ್ರಮ ಜರಗಲಿದೆ. ಸಾರ್ವಜನಿಕರು ಭಾಗವಹಿಸಬೇಕಾಗಿ ಕಾರ್ಕಳ ಸೇವಾ ಕೇಂದ್ರದ ಸಂಚಾಲಕಿ ಬ್ರಹ್ಮಕುಮಾರಿ ವಿಜಯಲಕ್ಷ್ಮಿ ತಿಳಿಸಿದ್ದಾರೆ.