ತಂಗಳು ಅನ್ನ ಎಂದು ಸಸಾರ ಮಾಡ್ತೀರಾ? : ತಂಗಳನ್ನ ಆರೋಗ್ಯಕ್ಕೆ ಎಷ್ಟೊಂದು ಶಕ್ತಿ ಕೊಡುತ್ತೆಂದು ನಿಮಗೆ ಗೊತ್ತಾ?

ತುಂಬಾ ಮಂದಿಗೆ ತಂಗಳು ಅನ್ನವೆಂದರೆ ತಾತ್ಸಾರ ಭಾವನೆ. ಕೆಲವರಿಗೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವ ಭಾವನೆ ಬೆಳೆದುಬಿಟ್ಟಿದೆ. ಹಾಗಾಗಿ ತಂಗಳು ಅನ್ನವನ್ನು ಬಿಸಾಕುವವರೇ ಜಾಸ್ತಿ. ಆದರೆ ನೆನಪಿರಲಿ ಇಂತಹ ತಂಗಳನ್ನದಲ್ಲೂ ಇದೆ ಆರೋಗ್ಯಕ್ಕೆ ಪೂರಕವಾಗುವ ಅಂಶಗಳು! ಹೌದು. ತಂಗಳನ್ನ ಜೀರ್ಣಕ್ರಿಯೆಯ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿರುವ ಸಾಕಷ್ಟು ಪೋಷಕಾಂಶಗಳನ್ನು ಹೊಂದಿದೆ. ಅಲ್ಲದೇ ಇದರಿಂದ ಹಲವಾರು ಪ್ರಯೋಜನಗಳಿವೆ. ಹೀಗಾಗಿ ಇನ್ಮುಂದೆ ತಂಗಳು ಅನ್ನವನ್ನು ಎಸೆಯುವ ಮುನ್ನ ಇದರಿಂದ ಆಗುವ ಉಪಯೋಗಗಳೇನು ಎಂಬುದನ್ನು ತಿಳಿದುಕೊಳ್ಳಿ.
ಸ್ವಾತಂತ್ರ್ಯ ದಿನವೆಂದರೆ ಬಾಲ್ಯ ನೆನಪಾಗುತ್ತದೆ: ಈಗಲೂ ಕಾಡುವ ಆ ಸಂಭ್ರಮದ ಕ್ಷಣಗಳು:

-ಪ್ರಗತಿ ಎಸ್. ಸ್ವಾತಂತ್ರ್ಯ ದಿನಾಚರಣೆ ಬೆಳಿಗ್ಗೆಯಂತು ಎಲ್ಲರ ಮುಖದಲ್ಲೂ ಎಲ್ಲಿಲ್ಲದ ಸಂಭ್ರಮವೂ ಸಂಭ್ರಮ. ಸಮವಸ್ತ್ರ ಬೂಟ್ ಧರಿಸಿ ಕೈಯಲ್ಲಿ ಒಂದು ಬಾವುಟ ಹಿಡಿದು ನಡೆಯುತ್ತಿದ್ದೆವು ಶಾಲೆಯ ಕಡೆಗೆ. ಶಾಲೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಿದ್ದೆ.ಆದರೂ ಸ್ವಾತಂತ್ರ್ಯ ದಿನಾಚರಣೆ ಎಂದಾಗ ನೆನಪಾಗುವುದು ನನ್ನ ಬಾಲ್ಯದ ಶಾಲಾ ದಿನಗಳು. ಆ ದಿನಗಳಲ್ಲಿ ನಾನು ಪಟ್ಟ ಖುಷಿಗೆ ಕೊನೆಯೇ ಇರುತ್ತಿರಲಿಲ್ಲ. ಅಗಸ್ಟ್ ತಿಂಗಳ ಮೊದಲ ದಿನದಿಂದಲೇ ಶುರುವಾಗುವ ನಮ್ಮ ತಯಾರಿಗಳು ಆಗಸ್ಟ್ 15 ಬಂದರೂ ಮುಗಿಯುತ್ತಿರಲಿಲ್ಲ. […]
ಕಣ್ಮರೆಯಾದನು ಕಂಬಳ ಲೋಕದ ಚಿನ್ನ, ಕೊಳಚೂರು ಕೊಂಡೊಟ್ಟು”ಚೆನ್ನ”: ಅತೀ ಹೆಚ್ಚು ಪ್ರಶಸ್ತಿ ಗೆದ್ದಿದ್ದ ಕಂಬಳ ಪ್ರಿಯರ ಮುದ್ದಿನ ಕೋಣ ಇನ್ನಿಲ್ಲ

ಕಾರ್ಕಳ: ಕಂಬಳಲೋಕದಲ್ಲಿ ಈ ಚೆನ್ನನಿಗೆ ತುಂಬಾ ಮಂದಿ ಅಭಿಮಾನಿಗಳಿದ್ದರು. ಚೆನ್ನನ ಹೆಸರು ಕೇಳಿದಾಕ್ಷಣ ಎಲ್ಲರೂ ಕುಣಿದಾಡುತ್ತಿದ್ದರು. ಎಷ್ಟೋ ಪ್ರಶಸ್ತಿಗಳ ಪಟ್ಟವೇರಿದ್ದ ಈ ಚೆನ್ನ ಈಗ ಕಣ್ಮರೆಯಾಗಿದ್ದಾನೆ. ಕಂಬಳ ಕೂಟದಲ್ಲಿ ಈತನ ಓಟ ಕಂಡು ಆನಂದಪಟ್ಟಿದ್ದ ಅಭಿಮಾನಿಗಳು ಕೂಡ ಈತ ಅಸುನೀಗಿದ್ದಕ್ಕೆ ಕಂಬನಿಮಿಡಿಯುತ್ತಿದ್ದಾರೆ. ಕಂಬಳ ಕೂಟದ ಅತ್ಯಂತ ಜನಪ್ರಿಯ, ಅತಿ ಹೆಚ್ಚು ಪ್ರಶಸ್ತಿ ವಿಜೇತ ಪಟ್ಟಿಯಲ್ಲಿ ಅಗ್ರಗಣ್ಯ ಎನ್ನಿಸಿಕೊಂಡಿದ್ದ ಕೊಳಚೂರು ಕೊಂಡೊಟ್ಟು ಸುಕುಮಾರ್ ಶೆಟ್ಟಿ ಅವರ ʼಚೆನ್ನʼ ಎಂಬ ಹೆಸರಿನ ಕೋಣ ಗುರುವಾರ (ಆ.14) ಅಸುನೀಗಿದೆ. ಸುಮಾರು 25 […]
ಕಂಬಳ ಕೋಣಗಳೇ ಇಲ್ಲಿ ರಿಯಲ್ ಹೀರೋಗಳು! “ಕರಾವಳಿ” ಸಿನಿಮಾದ ಟೀಸರ್ ನೋಡಿ ಖುಷಿಯಿಂದ ದಂಗಾದ್ರು ಪ್ರೇಕ್ಷಕರು ! ಅಂತದ್ದೇನಿದೆ ಟೀಸರ್ ನಲ್ಲಿ?

ಕಳೆದ ಕೆಲವು ಸಮಯದಿಂದ “ಕರಾವಳಿ ” ಎನ್ನುವ ಸಿನಿಮಾ ಸದ್ದು ಮಾಡ್ತಿದೆ. ಇನ್ನೂ ರಿಲೀಸ್ ಆಗಿರದ ಈ ಸಿನಿಮಾ ಪೋಸ್ಟರ್ ಮತ್ತು ಫಸ್ಟ್ ಲುಕ್ ಮೂಲಕ ಸದ್ದು ಮಾಡುತ್ತಿದೆ. ಈ ಸದ್ದಿಗೆ ಕಾರಣ ಈ ಸಿನಿಮಾ “ಕರಾವಳಿ”ಯ ಜನಪದ ಕ್ರೀಡೆಯಾದ ಕಂಬಳದ ಕತೆಯನ್ನೊಳಗೊಂಡ ಚಿತ್ರವಾಗಿರೋದು. ಈಗ “ಕರಾವಳಿ” ಚಿತ್ರದ ಟೀಸರ್ ಎಲ್ಲೆಲ್ಲೂ ಅಬ್ಬರಿಸುತ್ತಿದ್ದು ಟೀಸರ್ ನೋಡಿದ ಪ್ರೇಕ್ಷಕರು ಖುಷಿಯಿಂದ ದಂಗಾಗಿದ್ದಾರೆ. ನಟ ಪ್ರಜ್ವಲ್ ದೇವರಾಜ್ (Prajwal Devaraj) ನಟಿಸಿ ಗುರುದತ್ ಗಾಣಿಗ Gurudath Ganiga ನಿರ್ದೇಶನ ಮಾಡುತ್ತಿರುವ […]
ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿದ “ಮಹಾವತಾರ ನರಸಿಂಹ” 91 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದ ಅನಿಮೇಷನ್ ಸಿನಿಮಾ !
ಕನ್ನಡದ ಸು ಫ್ರಂ ಸೋ ಥಿಯೇಟರ್ ಗಳಲ್ಲಿ ಅದ್ಬುತ ಯಶಸ್ಸು ಗಳಿಸುತ್ತಿರುವ ಬೆನ್ನಲ್ಲೇ ಇನ್ನೊಂದು ಸಿನಿಮಾ 91 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದ ಸುದ್ದಿ ಬಂದಿದೆ. ಹೌದು ಮಹಾವತಾರ ನರಸಿಂಹ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಅಭೂತಪೂರ್ವ ಯಶಸ್ಸನ್ನು ಕಂಡಿದೆ. ಕೇವಲ 10 ದಿನಗಳಲ್ಲಿ 91 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಈ ಸಿನಿಮಾ ಕಡಿಮೆ ಬಜೆಟ್ನಲ್ಲಿ ಸಿದ್ಧವಾಗಿದೆ. ಪೌರಾಣಿಕ ಕಥೆ ಮತ್ತು ಅತ್ಯುತ್ತಮ ಅನಿಮೇಷನ್ ಪ್ರೇಕ್ಷಕರನ್ನು ಆಕರ್ಷಿಸಿದೆ. ಹೊಂಬಾಳೆ ಫಿಲ್ಮ್ಸ್ ಈ ಚಿತ್ರನ್ನು ಅರ್ಪಿಸಿದೆ. […]