ನಗರದ ಪಣಿಯಾಡಿಯಲ್ಲಿ ಮೃತಪಟ್ಟ ರಾಷ್ಟ್ರ ಪಕ್ಷಿ ನವಿಲು: ಮಣಿಪಾಲದ ತಿಮ್ಮಕ್ಕ ಟ್ರೀ ಪಾರ್ಕ್ ನ ಗಸ್ತು ಅರಣ್ಯಾಧಿಕಾರಿ ಪಾಣ ಎಂಬವರಿಗೆ ಹಸ್ತಾಂತರ….

ಉಡುಪಿ: ನಗರದ ಪಣಿಯಾಡಿಯಲ್ಲಿ ರಾಷ್ಟ್ರ ಪಕ್ಷಿ ನವಿಲು ಜನ ವಸತಿ ಪ್ರದೇಶದಲ್ಲಿ ಅಸ್ಪಸ್ಥಗೊಂಡಂತೆ ಸೋಮವಾರ ಬೆಳಗ್ಗೆ ಕಂಡು ಬಂತು. ಕೂಡಲೇ ಸ್ಥಳೀಯರು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ರವಾನಿಸಿದ್ದಾರೆ‌.ಸ್ಥಳೀಯರ ಮಾಹಿತಿಯ ಮೇರೆಗೆ ಸಳಾಕಾಗಮಿಸಿದ ನಿತ್ಯಾನಂದ ಬಳಕಾಡುವರು ನವಿಲಿನ ದೇಹವನ್ನು ಪರಿಶೀಲಿಸಿದಾಗ ನವಿಲು ಮೃತಪಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ .ಕಳೆದ ರಾತ್ರಿ ಹಾರುವ ಸಂದರ್ಭ ನವಿಲು ವಿದ್ಯುತ್ ತಂತಿಗೆ ಸಿಲುಕಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ನವಿಲಿನ ಕಳೇಬರವನ್ನು ನಿತ್ಯಾನಂದ ಒಳಕಾಡು ಸ್ಥಳದಿಂದ ರವಾನಿಸಿದ್ದಾರೆ. […]