ಉಡುಪಿ ಕೃಷ್ಣಮಠದಲ್ಲಿ ದೀಪಾವಳಿ ಸಂಭ್ರಮ; ಪರಸ್ಪರ ಎಣ್ಣೆ ಹಚ್ಚಿಕೊಂಡು ಭಕ್ತರೊಂದಿಗೆ ಬೆರೆತ ಪರ್ಯಾಯ ಶ್ರೀಗಳು

ಉಡುಪಿ: ಉಡುಪಿಯ ಶ್ರೀ ಕೃಷ್ಣಮಠದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಜಲಪೂರಣ ಹಾಗೂ ಎಣ್ಣೆಶಾಸ್ತ್ರವನ್ನು ಮಾಡಲಾಯಿತು. ಜಲಪೂರಣ ಶಾಸ್ತ್ರದ ಅಂಗವಾಗಿ ಮಠದ ಪುರೋಹಿತರಾದ ರಾಘವೇಂದ್ರ ಕೊಂಡಂಚ ಇವರು ಕಲಶ ಪೂಜೆಯನ್ನು ಮಾಡಿದರು. ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಕಿರಿಯ ಸುಶೀಂದ್ರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಜಲಪೂರಣವನ್ನು ಮಾಡಲಾಯಿತು. ಮರುದಿನ ಬ್ರಾಹ್ಮೀ ಮುಹೂರ್ತದಲ್ಲಿ ಕೃಷ್ಣ ಮಠದ ಚಂದ್ರಶಾಲೆಯಲ್ಲಿ ಪುತ್ತಿಗೆ ಉಭಯ ಶ್ರೀಪಾದರು ಗಂದೋಪಚಾರದೊಂದಿಗೆ ಎಣ್ಣೆ ಶಾಸ್ತ್ರವನ್ನು ಮಾಡಿದರು. ನೆರೆದಿದ್ದ ಭಕ್ತರಿಗೂ ಎಣ್ಣೆಶಾಸ್ತ್ರವನ್ನು ಮಾಡಲಾಯಿತು.

ಉಡುಪಿ ಶ್ರೀಕೃಷ್ಣ ಮಠದಲ್ಲಿ ಅ.31ರಂದು ದೀಪಾವಳಿ ಆಚರಣೆ

ಉಡುಪಿ : ಉಡುಪಿ ಶ್ರೀಕೃಷ್ಣ ಮಠದಲ್ಲಿ ಅ.31ರಂದು ದೀಪಾವಳಿ ಆಚರಣೆ ನಡೆಯಲಿದೆ. ನ.1ರ ಶುಕ್ರವಾರ ಅಮಾವಾಸ್ಯೆ ಸಂಜೆ ಸುಮಾರು 6 ಗಂಟೆವರಗೆ ಮಾತ್ರ ಇರುವುದರಿಂದ ಅ. 31ರಂದು ದೀಪಾವಳಿ ಆಚರಣೆ ಮಾಡಲಾಗುವುದು ಎಂದು ಮಠದ ಪ್ರಕಟಣೆ ತಿಳಿಸಿದೆ. ಅ. 29ರಂದು ಯಮದೀಪ, ಅ. 30ರ ಬುಧವಾರ ನೀರು ತುಂಬಿಸುವುದು (ಹಿರಿಯರ ಹಬ್ಬ) ಹಾಗೂ ಅ. 31ರ ಗುರುವಾರ “ನರಕ ಚತುರ್ದಶಿ” ಚಂದ್ರೋದಯ ಕಾಲ ಬೆಳಿಗ್ಗೆ 5-15ಕ್ಕೆ ಎಣ್ಣಿ ಹಚ್ಚಿ ಸ್ನಾನ ಮಾಡುವ ಆಚರಣೆ ಜರುಗಲಿದ್ದು, ಅಂದು ಸಂಜೆ […]