ಉಡುಪಿ: ಗಿರಿಜಾ ಹೆಗ್ಡೆ ಅವರಿಗೆ “ಶಿಕ್ಷಕ ರತ್ನ” ಪ್ರಶಸ್ತಿ.

ಉಡುಪಿ: ಶ್ರೀಮತಿ ಗಿರಿಜಾ ಹೆಗಡೆ ಅವರು ಅರ್ಥಶಾಸ್ತ್ರ ಉಪನ್ಯಾಸಕರಾಗಿ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜ್ ಉಡುಪಿ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ವೃತ್ತಿಯಲ್ಲಿ 25 ವರ್ಷಗಳ ಸುದೀರ್ಘ ಅನುಭವ ಹೊಂದಿದ್ದಾರೆ. ವಿದ್ಯಾರ್ಹತೆ: ಎಂ.ಎ.(ಅರ್ಥಶಾಸ್ತ್ರ), ಎಂ.ಫಿಲ್(ಉತ್ತರಕನ್ನಡ ಕೈಗಾರಿಕೆಗಳ ಪ್ರಗತಿ), ಎಂ.ಬಿ.ಎ.(ಹೆಚ್ ಆರ್), ಬಿ.ಎಡ್.ಸ್ಲೆಟ್ ಪರೀಕ್ಷೆ ಪಾಸಾಗಿರುತ್ತಾರೆ. ನಿಮ್ಹಾನ್ಸ್ ಕೊಡಮಾಡುವ ಒಂದುವಾರದ ಜೀವನಕೌಶಲ್ಯ ತರಬೇತಿ ಪಡೆದಿದ್ದಾರೆ. ಹವ್ಯಾಸ-ಕಥೆ ಕವನ ರಚನೆ.ಇವರು ಪ್ರಕಟಿಸಿದ ಕೃತಿಗಳು1.ಅನಾವರಣ ಕವನ ಸಂಕಲನ .ಕಾರ್ನಾಡ್ ಸದಾಶಿವರಾವ್ ಸ್ಮಾರಕ ಪ್ರಶಸ್ತಿ ಪಡೆದಿದೆ.2.ಅಗಸೆಬಾಗಿಲು- ಕವನ ಸಂಕಲನ3.ನತ್ತು- ಕಥಾ ಸಂಕಲನ ದ ಕಥೆಗೆ […]