ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿಗೆ ಡಾ. ತುಕರಾಂ ಪೂಜಾರಿ ಬಂಟ್ವಾಳ ಮತ್ತು ಗೋಪು ಮಡಿವಾಳ ಅಲೆವೂರು ಆಯ್ಕೆ

ಉಡುಪಿ: ಬನ್ನಂಜೆ ಬಾಬು ಅಮೀನ್ ಜಾನಪದ ವಿದ್ವಾಂಸ ಪ್ರಶಸ್ತಿಗೆ ಜಾನಪದ ವಿದ್ವಾಂಸ ಡಾ. ತುಕರಾಂ ಪೂಜಾರಿ ಬಂಟ್ವಾಳ ಹಾಗೂ ಜಾನಪದ ಕಲಾವಿದ ಪ್ರಶಸ್ತಿಗೆ ದೈವಾರಾಧನೆಯ ಸೇವಕ ಗೋಪು ಮಡಿವಾಳ ಅಲೆವೂರು ಅವರು ಆಯ್ಕೆಯಾಗಿದ್ದಾರೆ‌. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಸಂಚಾಲಕ ಭಾಸ್ಕರ ಸುವರ್ಣ ಅವರು, ಯುವವಾಹಿನಿ ಉಡುಪಿ ಘಟಕದ ಆಶ್ರಯದಲ್ಲಿ ಇದೇ ಮಾ. 15ರಂದು ಸಂಜೆ 4.30ಕ್ಕೆ ಉಡುಪಿ ಚಿಟ್ಟಾಡಿಯ ಲಕ್ಷ್ಮೀ ಟ್ರೇಡ್ ಸೆಂಟರ್‌ನ ಲಕ್ಷ್ಮೀ ಸಭಾಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅವರಿಗೆ […]