ಉಡುಪಿ: ಆತ್ರಾಡಿ ರಿಕ್ಷಾ ಚಾಲಕನಿಗೆ ಹಲ್ಲೆ ಪ್ರಕರಣ; ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು.

ಉಡುಪಿ: ಅತ್ರಾಡಿ ಶೇಡಿಗುಡ್ಡೆ ಬಳಿ ರಿಕ್ಷಾ ಚಾಲಕನಿಗೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆತ್ರಾಡಿ ನಿವಾಸಿ ಅಬೂಬಕ್ಕರ್ (50) ಅವರನ್ನು ಆರೋಪಿಗಳಾದ ಹಿರಿಯಡಕ ಬೊಮ್ಮಾರಬೆಟ್ಟು ನಿವಾಸಿ ಸಂದೇಶ್ (31) ಹಾಗೂ ಪಾಪೂಜೆ ದರ್ಕಾಸ್ ನಿವಾಸಿ ಸುಶಾಂತ್ (32) ಅವರು ದ್ವಿಚಕ್ರವಾಹನದಲ್ಲಿ ಆಗಮಿಸಿ ಮೇ 1ರಂದು ರಾತ್ರಿ ಹಲ್ಲೆ ನಡೆಸಿದ್ದರು. ಈ ಬಗ್ಗೆ ಹಿರಿಯಡಕ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ಪೊಲೀಸರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದು, ಅನಂತರ […]