ಬೆಲೆ ಏರಿಕೆ ಬಿಸಿ: ಲಡ್ಡು ತಯಾರಿಸಲು ನಂದಿನಿ ತುಪ್ಪಕ್ಕೆ ವಿದಾಯ ಹೇಳಿದ ತಿರುಪತಿ ತಿಮ್ಮಪ್ಪ ದೇವಸ್ಥಾನ

ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ನಡೆಸುತ್ತಿರುವ ನಂದಿನಿ ಡೈರಿಯ ತುಪ್ಪವನ್ನು ಬಳಸಿ ತಿರುಪತಿ ದೇವಸ್ಥಾನದಲ್ಲಿ ತಿರುಪತಿ ಲಡ್ಡುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್ ತಿಳಿಸಿದ್ದಾರೆ. ನಂದಿನಿ ಹಾಲಿನ ಉತ್ಪನ್ನಗಳ ಬೆಲೆ ಏರಿಕೆಯಿಂದಾಗಿ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮತ್ತೊಂದು ಕಂಪನಿಗೆ ತುಪ್ಪದ ಗುತ್ತಿಗೆ ನೀಡಿದೆ. ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಾಯಕ್, ಆಗಸ್ಟ್ 1 ರಿಂದ ಹಾಲಿನ ದರ ಏರಿಕೆ ಮಾಡುವುದಾಗಿ ಘೋಷಿಸಿದ್ದರಿಂದ ತುಪ್ಪದ ಬೆಲೆಯೂ ಏರಿಕೆಯಾಗಲಿದೆ. ತಿರುಪತಿ ಲಡ್ಡುಗಳನ್ನು ಕಡಿಮೆ ಬೆಲೆಗೆ […]