ವಿಶೇಷ ಮಕ್ಕಳ‌ ಸೇವೆ ದೇವರು ನೀಡಿದ ಅವಕಾಶ: ಮ್ಯಾಥ್ಯೂವಾಸ್

ಉಡುಪಿ: ‌ವಿಶೇಷ ಮಕ್ಕಳನ್ನು ನೋಡಿಕೊಳ್ಳುವವರು ಸೇವಾ ಮನೋಭಾವನೆ ಹೊಂದಬೇಕು. ಇಲ್ಲದಿದ್ದರೆ ಆ ಕಾರ್ಯವನ್ನು ಪರಿಪೂರ್ಣವಾಗಿ ಮಾಡಲು ಸಾಧ್ಯವಿಲ್ಲ. ವಿಶೇಷ ಮಕ್ಕಳ ಸೇವೆ ಮಾಡುವುದು ವೃತ್ತಿಯಲ್ಲ, ಅದೊಂದು ದೇವರು ನೀಡಿದ ಅವಕಾಶ ಎಂದು ಕಿನ್ನಿಗೋಳಿ ಸೇಂಟ್‌ ಮೇರಿಸ್‌ ವಿಶೇಷ ಶಾಲೆಯ ಸಂಚಾಲಕ ಹಾಗೂ ಧರ್ಮಗುರು ಮ್ಯಾಥ್ಯೂವಾಸ್‌ ಹೇಳಿದರು. ಕರ್ನಾಟಕ ರಾಜ್ಯ ವಿಶೇಷ ಮಕ್ಕಳ ಶಾಲೆಯ ಶಿಕ್ಷಕರು ಹಾಗೂ ಶಿಕ್ಷಕೇತರ ಸಂಘದ ವತಿಯಿಂದ ಅಂಬಲಪಾಡಿ ಶ್ಯಾಮಿಲಿ ಸಭಾಭವನದಲ್ಲಿ ಶನಿವಾರ ಆಯೋಜಿಸಲಾದ ವಿಶೇಷ ಮಕ್ಕಳ ಶಾಲೆಯ ಶಿಕ್ಷಕರ ಹಾಗೂ ಶಿಕ್ಷಕೇತರ ಸಮಾವೇಶವನ್ನು […]