ಕಾರ್ಕಳ: ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿಯವರ ದಿಗ್ವಿಜಯ ಮಹೋತ್ಸವ

ಕಾರ್ಕಳ: ಶ್ರಿ ಶಿವಾನಂದ ಸರಸ್ವತಿ ಸ್ವಾಮೀಜಿ ಯವರ ಬೆಳ್ಳಿ ಹಬ್ಬದ ಪ್ರಯುಕ್ತ ದಿಗ್ವಿಜಯ ಮಹೋತ್ಸವವು ಕಾರ್ಕಳದ ಅನಂತ ಶಯನದಿಂದ ಕಾರ್ಕಳ ಬಸ್ ನಿಲ್ದಾಣ ವೆಂಕಟರಮಣ ದೇವಾಲಯ ಬಳಿಯಿಂದ ಜೊಡುರಸ್ತೆ ಹಿರ್ಗಾನ ದತ್ತ ಸಾಗಿ ನೆಲ್ಲಿಕಟ್ಟೆಯ ಮೂಲಕ ಆದಿಶಕ್ತಿ ಮಹಾಲಕ್ಷ್ಮಿ ದೇವಸ್ಥಾನದವರೆಗೆ ನಡೆಯಿತು. ಮೆರವಣಿಗೆಯಲ್ಲಿ ಕಂದಿಲು ನೃತ್ಯ , ಡೊಳ್ಳು ಕುಣಿತ, ಇಪ್ಪತ್ತೈದಕ್ಕು ಹೆಚ್ಚು ಭಜನಾ ಮಂಡಳಿಗಳು, ಸ್ತಬ್ದಚಿತ್ರಗಳು, ಸಾಗಿ ಬಂದವು. ಸರಿ ಸುಮಾರು ಐದು ಸಾವಿರ ರಕ್ಕು ಹೆಚ್ಚು ಭಕ್ತರು ಭಾಗವಹಿಸಿದ್ದರು.