ಮಾಹೆ: ಆಫ್ರಿಕಾದ ವೈದ್ಯರಿಗೆ ಬಂಜೆತನ ನಿವಾರಣಾ ತರಬೇತಿ ಕಾರ್ಯಕ್ರಮ

ಮಣಿಪಾಲ: ಮಾಹೆ-ಮೆರ್ಕ್ ಫೌಂಡೇಶನ್ ನಲ್ಲಿ ಐ.ವಿ.ಎಫ್ ಭ್ರೂಣಶಾಸ್ತ್ರ ತರಬೇತಿ ಕಾರ್ಯಕ್ರಮ ಪೂರ್ಣಗೊಳಿಸಿದ ಆಫ್ರಿಕಾ ದೇಶದ ವೈದ್ಯರ ಸಮೂಹವು ತಮ್ಮ ಪ್ರಮಾಣಪತ್ರಗಳನ್ನು ಗುರುವಾರದಂದು ಮಾಹೆ ಮತ್ತು ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ ಅಧ್ಯಕ್ಷ ಡಾ ರಂಜನ್ ಪೈ ಅವರಿಂದ ಸ್ವೀಕರಿಸಿತು. ಮಾಹೆ ಮತ್ತು ಜರ್ಮನಿಯ ಮೆರ್ಕ್ ಫೌಂಡೇಶನ್ ನೀಡುವ ಐ.ವಿ.ಎಫ್ ಭ್ರೂಣಶಾಸ್ತ್ರ ತರಬೇತಿ ಕಾರ್ಯಕ್ರಮವು ಬಂಜೆತನದ ಕೊರಗನ್ನು ನೀಗಿಸಲು ಇನ್-ವಿಟ್ರೊ ಫಲವತ್ತತೆ ತಂತ್ರಗಳನ್ನು ಬಳಸಲು ವೈದ್ಯರಿಗೆ ಅಧಿಕಾರ ನೀಡುತ್ತದೆ. ಕಾರ್ಯಕ್ರಮದ ಪ್ರಶಿಕ್ಷಣಾರ್ಥಿಗಳಲ್ಲಿ ಒಬ್ಬರಾದ ಘಾನಾದ ಮೋನಿಕಾ ಬಾವುವಾ […]

ಮಾಹೆ: ತುಳು ಸಂಸ್ಕೃತಿ ಆಚಾರ ವಿಚಾರದ ಬಗ್ಗೆ ಅರಿವು ನೀಡುವ ಆನ್ ಲೈನ್ ಕೋರ್ಸ್ ಆರಂಭ

ಮಣಿಪಾಲ: ಉನ್ನತ ಶಿಕ್ಷಣವು ಸ್ಥಳೀಯ ಮತ್ತು ಜಾಗತಿಕ ಸಂಸ್ಕೃತಿ ನಡುವೆ ಸಂಪರ್ಕ ಸ್ಥಾಪಿಸುವಲ್ಲಿ ಅದರ ಅರ್ಥವನ್ನು ಕಂಡುಕೊಳ್ಳುತ್ತದೆ. ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ಅದರ ಜಾಗತಿಕ ದೃಷ್ಟಿಕೋನದ ಜೊತೆಗೆ ಸಮುದಾಯದೊಂದಿಗೆ ಸತತವಾಗಿ ಕೆಲಸ ಮಾಡುತ್ತಿದೆ. ತುಳುನಾಡಿನ ಸಂಸ್ಕೃತಿಯ ಆನ್‌ಲೈನ್ ಕೋರ್ಸ್ ಸ್ಥಳೀಯ ಮತ್ತು ಜಾಗತಿಕ ಸಂಸ್ಕೃತಿಗಳ ಛೇದಕದಲ್ಲಿ ಅಧ್ಯಯನ ಮತ್ತು ಸಂಶೋಧನೆಗೆ ಹೊಸ ಆಯಾಮವನ್ನು ನೀಡುವಂತಹ ಒಂದು ಪ್ರಯತ್ನವಾಗಿದೆ ಎಂದು ಬೆಂಗಳೂರಿನ ಮಣಿಪಾಲ್ ಶಿಕ್ಷಣ ಮತ್ತು ವೈದ್ಯಕೀಯ ಸಮೂಹ ಸಂಸ್ಥೆಯ ಅಧ್ಯಕ್ಷ ಮತ್ತು ಮಾಹೆಯ ಅಧ್ಯಕ್ಷ ಡಾ […]

ತುಳುನಾಡಿನ ಸಂಸ್ಕೃತಿ ಅಧ್ಯಯನ ಆನ್‌ಲೈನ್‌ ಕೋರ್ಸ್‌ ಉದ್ಘಾಟನೆ: ಇಂದು ಸಂಜೆ ಮಾಹೆಯ ಅಂಗಣದಲ್ಲಿ ಹುಲಿವೇಷ ಕುಣಿತ

ಮಣಿಪಾಲ: ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ ನ ಸೆಂಟರ್‌ ಫಾರ್‌ ಇಂಟರ್‌ಕಲ್ಚರಲ್‌ ಸ್ಟಡೀಸ್‌ ಆ್ಯಂಡ್‌ ಡಯಲಾಗ್‌  ಘಟಕವು ‘ಡಿಸರ್ನಿಂಗ್‌ ಇಂಡಿಯ: ಲಿವಿಂಗ್‌ ಕಲ್ಚರ್ಸ್‌ ಆಫ್‌ ತುಳುನಾಡು’ ಎಂಬ ಶೀರ್ಷಿಕೆಯಲ್ಲಿ ಆನ್‌ಲೈನ್‌ ಕೋರ್ಸ್‌ ಅನ್ನು ಆರಂಭಿಸುತ್ತಿದ್ದು ಇದರ ಉದ್ಘಾಟನೆ ಆಗಸ್ಟ್‌ 18 ಗುರುವಾರ ಸಂಜೆ 4:30 ಗಂಟೆಗೆ ಮಣಿಪಾಲದ ಮಾಹೆ ಮುಖ್ಯ ಕಚೇರಿಯ ಅಂಗಣದಲ್ಲಿ ನಡೆಯಲಿದೆ. ಮಣಿಪಾಲ್‌ ಶಿಕ್ಷಣ ಮತ್ತು ವೈದ್ಯಕೀಯ ಬಳಗದ ಸಂಸ್ಥೆಗಳ ಅಧ್ಯಕ್ಷ ಡಾ. ರಂಜನ್‌ ಪೈ, ಮಾಹೆಯ ಸಹಕುಲಾಧಿಪತಿ ಡಾ. ಎಚ್‌. ಎಸ್‌. ಬಲ್ಲಾಳ್‌, ಕುಲಪತಿ […]

ಮಣಿಪಾಲ್ ಮ್ಯಾರಥಾನ್ 2023ರ 5 ನೇ ಆವೃತ್ತಿ ದಿನಾಂಕ ಪ್ರಕಟ: ಮುಂದಿನ ವರ್ಷ 12 ಫೆಬ್ರವರಿಯಂದು ಮ್ಯಾರಥಾನ್ ಆಯೋಜನೆ; 15000 ಜನರು ಭಾಗವಹಿಸುವ ನಿರೀಕ್ಷೆ

ಮಣಿಪಾಲ: ಮಂಗಳವಾರದಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ್ ಮ್ಯಾರಥಾನ್ 2023ರ 5 ನೇ ಆವೃತ್ತಿಯನ್ನು ಘೋಷಿಸಿತು. ಮಾಹೆ ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ ಮತ್ತು ಎನ್.ಇ.ಬಿ ಸ್ಪೋರ್ಟ್ಸ್ ಬೆಂಗಳೂರು ಇವರ ಸಹಯೋಗದೊಂದಿಗೆ ಮ್ಯಾರಥಾನ್ ಆಯೋಜಿಸಲಾಗುವುದು. ಮಣಿಪಾಲ್ ಮ್ಯಾರಥಾನ್‌ನ 5 ನೇ ಆವೃತ್ತಿಯು ಬಾಲ್ಯದ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. “ಆರಂಭಿಕ ಪತ್ತೆ ಜೀವಗಳನ್ನು ಉಳಿಸುತ್ತದೆ-ಐ ಕ್ಯಾನ್ ಸರ್-ವೈವ್” ಎನ್ನುವ ಅಡಿಬರಹದೊಂದಿಗೆ ಮ್ಯಾರಥಾನ್ ಆಯೋಜನೆಗೊಳ್ಳಲಿದೆ. ಈ ಮ್ಯಾರಥಾನ್ ಮೂಲಕ […]

ಮಣಿಪಾಲ: ಮಾಹೆ ಸಂಸ್ಥೆಗಳ ವತಿಯಿಂದ 76ನೇ ಸ್ವಾತಂತ್ರ್ಯ ದಿನಾಚರಣೆ

ಮಣಿಪಾಲ: ಮಾಹೆಯ ಉನ್ನತ ಶಿಕ್ಷಣ ಅಕಾಡೆಮಿ ವತಿಯಿಂದ ದೇಶಭಕ್ತಿ ತುಂಬಿದ 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮಾಹೆಯ ಕುಲಪತಿ ಡಾ.ಎಚ್.ಎಸ್. ಬಲ್ಲಾಳ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಧ್ವಜಾರೋಹಣ ನೆರವೇರಿಸಿ,1955 ರ ವಿಲ್ಲಿಸ್ ಜೀಪ್ ನಲ್ಲಿ ಒಟ್ಟು ಇಪ್ಪತ್ಮೂರು ತುಕಡಿಗಳು ಭಾಗವಹಿಸಿದ್ದ ಪರೇಡ್‌ ತಂಡಗಳ ಪರಿಶೀಲನೆ ನಡೆಸಿದರು. ಮಾಹೆಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ ಡಾ.ಎಂ.ಡಿ.ವೆಂಕಟೇಶ್ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಯ ಸಂದೇಶ ನೀಡಿದರು. ಮಾಹಿತಿ-ತಂತ್ರಜ್ಞಾನ, ಬ್ಯಾಂಕಿಂಗ್ ತಂತ್ರಜ್ಞಾನ ಮತ್ತು ಇತರ ಹಲವು ಕ್ಷೇತ್ರಗಳಲ್ಲಿ ಭಾರತವು ಹೇಗೆ ಮುನ್ನಡೆಯುತ್ತದೆ ಎಂಬ […]