ರಾಷ್ಟ್ರೀಯ ಗುಣಮಟ್ಟ ಸಮಾವೇಶ: ಮಂಗಳೂರು ವಿಮಾನ ನಿಲ್ದಾಣಕ್ಕೆ ಮೂರು ಚಿನ್ನದ ಪ್ರಶಸ್ತಿಯ ಗರಿ

ಮಂಗಳೂರು: ರಾಷ್ಟ್ರೀಯ ಗುಣಮಟ್ಟ ಸಮಾವೇಶದಲ್ಲಿ Mangalore International Airport ಮೂರು ಚಿನ್ನದ ಪ್ರಶಸ್ತಿಗಳನ್ನು ಗೆದ್ದು ಗಮನ ಸೆಳೆದಿದೆ. ವಿಮಾನ ನಿಲ್ದಾಣದ ತಂಡಗಳು Poka-Yoke ಪರಿಕಲ್ಪನೆಯ ಆಧಾರದ ಮೇಲೆ ನವೀನ ಮತ್ತು ಸುರಕ್ಷತಾ ಪರಿಹಾರಗಳನ್ನು ಪ್ರದರ್ಶಿಸಿ ಈ ಸಾಧನೆ ಮಾಡಿವೆ. ಮಂಗಳೂರು ಅಪ್ಡೇಟರ್ ಸರ್ವಿಸಸ್ ಲಿಮಿಟೆಡ್ ಸಹಯೋಗದಲ್ಲಿ ನಡೆದ ಈ ಸಮಾವೇಶದಲ್ಲಿ, ಸಜಿತ್ ಇ.ವಿ. ಮತ್ತು ವಿಜಯಲಕ್ಷ್ಮಿ ನೇತೃತ್ವದ ತಂಡವು ಹೈ-ಮಾಸ್ಟ್ ನಿರ್ವಹಣೆಗೆ ರಿಮೋಟ್-ಕಂಟ್ರೋಲ್ ಅಪಾಯ ತಡೆ ಸಾಧನವನ್ನು ಅಭಿವೃದ್ಧಿಪಡಿಸಿ ಚಿನ್ನದ ಪ್ರಶಸ್ತಿಯನ್ನು ಪಡೆದುಕೊಂಡಿತು. ಇದೇ ವೇಳೆ ಕಿರಣ್ […]
ಬರಿದಾಗುತ್ತಿದೆ ಅಂತರ್ಜಲ: ಕರಾವಳಿಗರಿಗೆ “ಹಾಟ್” ನ್ಯೂಸ್! ಮುಂದಿದೆ ಸಂಕಷ್ಟ?

ದಕ್ಷಿಣ ಕನ್ನಡದಲ್ಲಿ ಬಿಸಿಲಿನ ತೀವ್ರತೆ: ಅಂತರ್ಜಲ ಮಟ್ಟ ಕುಸಿತ, ಕುಡಿಯುವ ನೀರಿಗೆ ಆತಂಕ ರಾಜ್ಯದಲ್ಲಿ ಅತೀ ಹೆಚ್ಚು ಮಳೆಯಾಗುವ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಈ ಬಾರಿ ಪರಿಸ್ಥಿತಿ ತೀವ್ರವಾಗಿ ಬದಲಾಗಿದೆ. 35–36 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದ್ದು, ಬಿಸಿಲಿನ ತೀವ್ರತೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಕುಸಿಯುತ್ತಿದೆ ಅಂತರ್ಜಲ, ಬರಿದಾಗುತ್ತಿವೆ ಬಾವಿಗಳು ಜಿಲ್ಲೆಯ ಹಲವು ಭಾಗಗಳಲ್ಲಿ, ವಿಶೇಷವಾಗಿ ಪುತ್ತೂರು, ಸುಳ್ಯ ಮತ್ತು ಬೆಳ್ತಂಗಡಿ ಪ್ರದೇಶಗಳಲ್ಲಿ, ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿದಿದೆ. ಎಂದಿಗೂ ನೀರಿನಿಂದ […]
ಬೆಂಗಳೂರಿನ ಹೆಸರಘಟ್ಟದಲ್ಲಿರುವ ಸರ್ಕಾರಿ ಪೌಲ್ಟ್ರಿ ಫಾರಂನಲ್ಲಿ ಪತ್ತೆಯಾಯ್ತು ಬರ್ಡ್ ವೈರಸ್! ಚಿಕನ್ ಪ್ರಿಯರಿಗೆ ಅಲರ್ಟ್!

ಬೆಂಗಳೂರು: ಬೆಂಗಳೂರಿನ ಹೆಸರಘಟ್ಟದಲ್ಲಿರುವ ಸರ್ಕಾರಿ ಪೌಲ್ಟ್ರಿ ಫಾರಂನಲ್ಲಿ H5N1 (Bird Flu) ವೈರಸ್ ಪತ್ತೆಯಾಗಿದೆ. ಇದು ರಾಜ್ಯದಲ್ಲಿ ಆತಂಕ ಹುಟ್ಟಿಸಿದ್ದು, ತಕ್ಷಣವೇ ಫಾರಂ ಅನ್ನು ಮುಚ್ಚಲಾಗಿದೆ. ಫಾರಂನಲ್ಲಿದ್ದ ಕೋಳಿಗಳನ್ನು ಹತ್ಯೆ ಮಾಡಿ ನೆಲದಲ್ಲಿ ಹೂತು ವಿಲೇವಾರಿ ಮಾಡಲಾಗಿದೆ. ಸರ್ಕಾರದ ತುರ್ತು ಕ್ರಮಗಳು ವೈರಸ್ ಹರಡುವ ಬಗ್ಗೆ ಮಾಹಿತಿ ಜನರಿಗೆ ಸೂಚನೆಗಳು ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಹಕ್ಕಿ ಜ್ವರ (H5N1) ಪತ್ತೆಯಾದ ಹಿನ್ನೆಲೆಯಲ್ಲಿ ಸರ್ಕಾರ ತುರ್ತು ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ಪರಿಸ್ಥಿತಿ ನಿಯಂತ್ರಣದಲ್ಲಿಡಲು ಪ್ರಯತ್ನ ನಡೆಯುತ್ತಿದೆ, ಆದರೆ ಸಾರ್ವಜನಿಕರು […]
ಮಣಿಪಾಲ MSDC ಯಲ್ಲಿಏ.20 ರಿಂದ ರೆಸಿನ್ ಆರ್ಟ್ ಸಮ್ಮರ್ ಕ್ಯಾಂಪ್: ಇಲ್ಲಿದೆ ಕ್ರಿಯಾಶೀಲತೆಗೆ ವೇದಿಕೆ

ಉಡುಪಿ: Manipal Skill Development Center ವತಿಯಿಂದ ಏಪ್ರಿಲ್ 20ರಿಂದ 24ರವರೆಗೆ ರೆಸಿನ್ ಆರ್ಟ್ ಸಮರ್ ಕ್ಯಾಂಪ್ನ್ನು ಆಯೋಜಿಸಲಾಗಿದೆ. ಪ್ರತಿದಿನ ಬೆಳಿಗ್ಗೆ 10:30ರಿಂದ ಮಧ್ಯಾಹ್ನ 12:30ರವರೆಗೆ ತರಗತಿಗಳು ನಡೆಯಲಿವೆ. ಈ ಶಿಬಿರದಲ್ಲಿ ಭಾಗವಹಿಸುವವರು coasters, ocean art, bookmark ಹಾಗೂ key chain ಮೊದಲಾದ ರೆಸಿನ್ ಕಲಾಕೃತಿಗಳನ್ನು ತಯಾರಿಸುವ ವಿಧಾನವನ್ನು ಕಲಿಯಲಿದ್ದಾರೆ. ಎಲ್ಲಾ ಅಗತ್ಯ ವಸ್ತುಗಳನ್ನು ಸಂಸ್ಥೆಯೇ ಒದಗಿಸಲಿದೆ. ಶಿಬಿರದಲ್ಲಿ ಭಾಗವಹಿಸಲು ಕನಿಷ್ಠ 14 ವರ್ಷ ವಯಸ್ಸು ಅಗತ್ಯವಾಗಿದ್ದು, ಪ್ರತಿ ಭಾಗವಹಿಸುವವರಿಂದ ₹2000 ಶುಲ್ಕವನ್ನು ನಿಗದಿಪಡಿಸಲಾಗಿದೆ. ಆಸಕ್ತರು […]
ನಾಳೆಯ ತಿಂಡಿಗೆ ಏನು ಮಾಡುವುದು ಎಂಬ ಚಿಂತೆಯೇ? ಇಲ್ಲಿದೆ ಬ್ರೇಕ್ ಫಾಸ್ಟ್ ರೆಸಿಪಿ ಲಿಸ್ಟ್

ಪ್ರತಿದಿನ ಸಂಜೆಯಾಗ್ತಿದ್ದ ಹಾಗೆ ಮನೆಯ ಗೃಹಿಣಿಯರಿಗೆ ಮುಖ್ಯವಾಗಿ ಕಾಡುವ ಚಿಂತೆ ಏನಂದ್ರೆ ನಾಳೆ ಬೆಳಗ್ಗಿನ ತಿಂಡಿಗೇನು ಮಾಡೋದು? ಮನೆಯ ಎಲ್ಲರ ತಲೆತಿಂದರೂ ಈ ಪ್ರಶ್ನೆಗೆ ಸಮಾಧಾನವಾದ ಉತ್ತರ ಸಿಗದೇ ಕೊನೆಗೆ ಮನೆಯೊಡತಿ ಅವಳಿಗೆ ತೋಚಿದಾ, ಸುಲಭವೆನಿಸಿದ ತಿಂಡಿಯನ್ನೇ ಮಾಡೋದು ಅನ್ನೋ ಸೀಕ್ರೆಟ್ ಮನೆಮಂದಿಗೆಲ್ಲಾ ಗೊತ್ತು. ಅದರಲ್ಲೂ ಗಂಡ, ಮಕ್ಕಳು, ಮನೆಯ ಹಿರಿಯರು ಎಲ್ಲರಿಗೂ ಒಪ್ಪೋ ತಿಂಡಿ ಮಾಡೋದು ಸವಾಲೇ ಸರಿ. ಇನ್ನು ಬ್ಯಾಚುಲರ್ಸ್ ಅಥವಾ ಕೆಲಸಕ್ಕೆ ಹೋಗೋ ಮಹಿಳೆಯರಿಗಂತೂ ಆದಷ್ಟು ಬೇಗ ರೆಡಿಯಾಗುವಂತಹಾ ತಿಂಡಿ ಲಿಸ್ಟ್ ಸಿಕ್ಕಿದ್ರೆ […]