ಕುಂದಾಪುರ: ಬೋನಿಗೆ ಬಿತ್ತು ಚಿರತೆ, ನಿರಾಳರಾದ ಯಡ್ಯಾಡಿ ಮತ್ಯಾಡಿ ಗ್ರಾಮಸ್ಥರು
ಕುಂದಾಪುರ : ಯಡ್ಯಾಡಿ ಮತ್ಯಾಡಿ ಗ್ರಾಮದ ಗುಡ್ಡಟ್ಟು ಶ್ರೀ ವಿನಾಯಕ ದೇವಸ್ಥಾನ ಪರಿಸರದಲ್ಲಿ ಕಳೆದ ಹಲವಾರು ದಿನದಿಂದ ಪರಿಸರದ ಜನರಲ್ಲಿ ಆತಂಕ ಮೂಡಿಸಿದ ಚಿರತೆ ಮಂಗಳವಾರ ರಾತ್ರಿ ಅರಣ್ಯ ಇಲಾಖೆ ಇಟ್ಟಿದ್ದ ಬೀನಿನಲ್ಲಿ ಸೆರೆಯಾಗಿದೆ. ಗುಡ್ಡಟ್ಟು ಬಳಿ ಅರಣ್ಯ ಇಲಾಖೆ ಇರಿಸಿದ ಬೋನಿಗೆ ಬಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಸುರಕ್ಷಿತವಾಗಿ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ. ಯಡ್ಯಾಡಿ ಮತ್ಯಾಡಿ ಪರಿಸರದಲ್ಲಿ ಚಿರತೆ ಉಪಟಳ ಹೆಚ್ಚಿದ್ದು, ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿದ್ದೂ ಇದೆ. ಚಿರತೆ ಉಪಟಳ ಬಗ್ಗೆ ಪರಿಸರ ನಾಗರಿಕರು ಶಂಕರನಾರಾಯಣ […]