ಕಟಪಾಡಿ ಗಣೇಶೋತ್ಸವ ವಿಸರ್ಜನಾ ಮೆರವಣಿಗೆ; ಮನಸೂರೆಗೊಂಡ ಪುಟಾಣಿಗಳ ಹುಲಿವೇಷ ಕುಣಿತ

ಉಡುಪಿ: ವರ್ಷದಿಂದ ವರ್ಷಕ್ಕೆ ಉಡುಪಿ ಜಿಲ್ಲೆಯಲ್ಲಿ ಹುಲಿ ವೇಷಗಳ ಅಬ್ಬರ ಹೆಚ್ಚುತ್ತಿದೆ. ಅಷ್ಟಮಿಯ ನಂತರ ಇದೀಗ ಗಣೇಶ ಚತುರ್ಥಿಯ ಸಂದರ್ಭದಲ್ಲಿ ವಿಸರ್ಜನಾ ಮೆರವಣಿಗೆ ವೇಳೆ ಹುಲಿವೇಷಗಳ ಭರಾಟೆ ಜೋರಾಗಿದೆ. ಅದರಲ್ಲೂ ಮರಿ ಹುಲಿಗಳ ಕಾರುಬಾರು ಜಬರ್ದಸ್ತ್ ಆಗಿದೆ. ಹೌದು, ಕರಾವಳಿಯ ಜನರಿಗೆ ಹುಲಿವೇಷವೆಂದರೆ ಅದೇನೋ ಸೆಳೆತ. ಬಾಲ್ಯದಲ್ಲೇ ಹುಲಿ ವೇಷಗಳ ಬೆನ್ನು ಹತ್ತಿ ಹೋಗಿ ಕುಣಿಯುವ ಮಕ್ಕಳು ಇಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಪುಟಾಣಿ ಮಕ್ಕಳು ವೇಷ ಧರಿಸಿ ಕುಣಿಯುವ ಪರಿಪಾಠ ಹೆಚ್ಚುತ್ತಿದೆ. ಹಿರಿಯ ವೇಷಧಾರಿಗಳನ್ನು […]