ಕಟ್‌ಬೆಲ್ತೂರು ಗ್ರಾಪಂ ಸದಸ್ಯನಿಗೆ ವ್ಯಕ್ತಿಯಿಂದ ಬೆದರಿಕೆ; ದೂರು ದಾಖಲು

ಕುಂದಾಪುರ: ಗ್ರಾಮ ಸಭೆಯನ್ನು‌ ಮುಂದೂಡಿದ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೋರ್ವ ಗ್ರಾಪಂ ಸದಸ್ಯನಿಗೆ ಬೆದರಿಕೆ ಹಾಕಿ‌ ಹಲ್ಲೆಗೆ ಯತ್ನಿಸಿದ ಘಟನೆ ಕಟ್‌ಬೆಲ್ತೂರು ಗ್ರಾಪಂ ನಲ್ಲಿ‌ ನಡೆದಿದೆ. ಜ.14ರಂದು ಕಟ್‌ಬೆಲ್ತೂರು ಗ್ರಾಪಂನ 2021-22 ನೇ ಸಾಲಿನ ಪ್ರಥಮ ಗ್ರಾಮ ಸಭೆ ನಡೆಯಬೇಕಿತ್ತು. ಆದರೆ, 2 ಸದಸ್ಯರು ಗೈರು ಹಾಜರಾದ ಕಾರಣ ಬೆಳಿಗ್ಗೆ 11.30ರ ವೇಳೆಗೆ ಗ್ರಾಮಸ್ಥರು ಸಭೆಯನ್ನು ಮುಂದೂಡುವ ಬಗ್ಗೆ ಸಲಹೆ ನೀಡದ ಮೇರೆಗೆ ಸಭೆಯನ್ನು ಜ.19ಕ್ಕೆ ಮುಂದೂಡಿಕೆ ಮಾಡಲಾಯಿತು. ಈ ವೇಳೆ ಹೊರಗಿನಿಂದ ಬಂದ ಆರೋಪಿ ಮಹೇಶ್ ಖಾರ್ವಿ […]