ಕಾರ್ಕಳ:ಸಂವಿಧಾನವನ್ನು ತೆರೆದ ಮನಸ್ಸಿನಿಂದ ಓದಬೇಕು” -ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ

ಕಾರ್ಕಳ:ಭಾರತೀಯ ಸಂವಿಧಾನ ಯಾವುದೇ ಜಾತಿಧರ್ಮ ಭಾಷೆ ಪ್ರದೇಶಕ್ಕೆ ಸೀಮಿತವಾದ ಗ್ರಂಥವಲ್ಲ.ಇದೊಂದು ರಾಷ್ಟ್ರೀಯತೆಯನ್ನು ಪ್ರತಿಬಿಂಬಿಸುವ ಪವಿತ್ರವಾದ ಮೇರು ಗ್ರಂಥ.ನಾವು ಪೂರ್ವ ಗ್ರಹ ಪೀಡಿತರಾಗಿ ಭಾರತೀಯ ಸಂವಿಧಾನವನ್ನು ಹಿಡಿದು ನೇೂಡಿದಾಗ ನಾವು ಅಲ್ಪ ಮಾನವರಾಗಿ ಬಿಂಬಿತರಾಗುತ್ತೇವೆ.ಇದು ಇಂದಿನ ಅತೀ ದೊಡ್ಡ ಸಮಸ್ಯೆ ಕೂಡ.ಸಮಾನತೆ ಭಾತೃತ್ವ ಸೌಹಾರ್ದತೆಯ ಗುಣಗಳೇ ನಮ್ಮ ಸಂವಿಧಾನದ ಆಶಯಯೂ ಹೌದು. ಡಾ.ಬಿ.ಆರ್.ಅಂಬೇಡ್ಕರ್ ರಂತಹ ಮಹಾನ್ ಸಂವಿಧಾನ ತಜ್ಜರ ಅವಿರತವಾದ ಪ್ರಯತ್ನದಿಂದಲೇ ಜಗತ್ತಿನಲ್ಲಿಯೇ ಅತಿ ಶ್ರೇಷ್ಠವಾದ ಸಂವಿಧಾನವನ್ನು ಹೊಂದುವ ಯೇೂಗ ನಮ್ಮದಾಗಿದೆ.ಹಾಗಾಗಿ ಭಾರತದ ಸಂವಿಧಾನವನ್ನು ನಮ್ಮೆಲ್ಲರ ಸುಖ ನೆಮ್ಮದಿಗಾಗಿ […]