ಮತ್ಸ್ಯಸಂಜೀವಿನಿ ಮೀನುಗಾರ ರೈತ ಉತ್ಪಾದಕ ಕಂಪನಿಯ ನೂತನ ಕಚೇರಿಯ ಉದ್ಘಾಟನೆ
![](https://udupixpress.com/wp-content/uploads/2023/03/Screenshot_2023-03-25-15-30-22-49.jpg)
ಉಪ್ಪುಂದ: ಕರ್ನಾಟಕ ಸರ್ಕಾರ, ಮೀನುಗಾರಿಕಾ ಇಲಾಖೆ ಹಾಗೂ ಸ್ಕೊಡ್ವೆಸ್ ಸಂಸ್ಥೆ ಸಹಯೋಗದಲ್ಲಿ ರಚಿತವಾದ ಮತ್ಸ್ಯಸಂಜೀವಿನಿ ಮೀನುಗಾರ ರೈತ ಉತ್ಪಾದಕ ಕಂಪನಿಯ ಕಚೇರಿಯನ್ನು ಶಾಸಕರಾದ ಬಿ.ಎಂ.ಸುಕುಮಾರ ಶೆಟ್ಟಿ ಮಾ.22 ರಂದು ಉದ್ಘಾಟಿಸಿದರು. ಅವರು ಮೀನುಗಾರ ರೈತರ ಅಭ್ಯುದಯವನ್ನು ಉದ್ದೇಶಿಸಿ ಆರಂಭಿಸಿರುವ ಯೋಜನೆಯ ಸದುಪಯೋಗ ಪಡೆದುಕೊಂಡು ಎಲ್ಲ ಮೀನುಗಾರರು ಪ್ರಗತಿಯನ್ನು ಸಾಧಿಸಬೇಕೆಂದು ನುಡಿದರು. ಸಂಸ್ಥೆಯ ಬೆಳವಣಿಗೆಗೆ ತನ್ನೆಲ್ಲ ಸಹಕಾರವನ್ನು ನೀಡುವುದಾಗಿ ತಿಳಿಸಿದರು. ಕಂಪನಿಯ ಅಧ್ಯಕ್ಷರಾದ ಆನಂದ ಖರ್ವಿ ಉಪ್ಪುಂದ ಪ್ರಾಸ್ತಾವಿಕ ನುಡಿಗಳನ್ನಾಡಿ ಕಂಪನಿಯ ಉದ್ದೇಶ ಹಾಗೂ ಮೀನುಗಾರರಿಗೆ ಸಿಗುವ ಪ್ರಯೋಜನಗಳ […]