ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಲೀಪ್ ಹೆಗ್ಡೆ ಮನೆಗೆ ಸಾರಾಯಿ ಬಾಟಲಿ ಎಸೆತ: ರಾಜಕೀಯ ದುರುದ್ದೇಶ ಶಂಕೆ

ಹಿರಿಯಡ್ಕ: ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಲೀಪ್ ಹೆಗ್ಡೆ ಅವರ ಕುಕ್ಕೆಹಳ್ಳಿ ಮನೆಯಲ್ಲಿ ಶುಕ್ರವಾರದಂದು ತಡ ರಾತ್ರಿ ಸುಮರು 11.30 ಗಂಟೆಗೆ ಕೆಲವು ಕಿಡಿಕೇಡಿಗಳು ಸಾರಾಯಿ ಬಾಟಲಿಯನ್ನು ಎಸೆದು ಬೆದರಿಕೆ ಒಡ್ಡಿದ ಘಟನೆ ನಡೆದಿದೆ. ಯಾರೋ ರಾಜಕೀಯ ದುರುದ್ದೇಶದಿಂದ ಈ ರೀತಿ ಮಾಡಿರಬೇಕು ಎಂದು ದಿಲೀಪ್ ಹೆಗ್ಡೆ ಹೇಳಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಕಿಡಿಗೇಡಿಗಳ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಕಿಡಿಗೇಡಿಗಳನ್ನು ಶೀಘ್ರವೆ ಬಂಧಿಸುವಂತೆ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, […]

ಆತ್ರಾಡಿ ಮದಗದಲ್ಲಿ ತಾಯಿ, ಮಗಳ ಮೃತ ದೇಹ ಪತ್ತೆ: ಅಸಹಜ ಸಾವಿನ ಶಂಕೆ

ಉಡುಪಿ:  ಉಡುಪಿ ತಾಲೂಕಿನ ಆತ್ರಾಡಿ ಗ್ರಾ.ಪಂ ವ್ಯಾಪ್ತಿಯ ಮದಗದಲ್ಲಿ ತಾಯಿ ಮತ್ತು 10 ವರ್ಷದ ಮಗುವಿನ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೊಲೆಯಾದವರನ್ನು ಮದಗ ನಿವಾಸಿ 28 ವರ್ಷದ ಚೆಲುವಿ ಹಾಗೂ ಆಕೆಯ ಮಗಳು 10 ವರ್ಷದ ಪ್ರಿಯಾ ಎಂದು ಗುರುತಿಸಲಾಗಿದೆ. ಇವರ ಮೃತದೇಹ ಮನೆಯ ಕೋಣೆಯಲ್ಲಿ ಪತ್ತೆಯಾಗಿದ್ದು, ಬಾಯಿಯಲ್ಲಿ ರಕ್ತದ ಕಲೆಗಳು ಕಂಡು ಬಂದಿದೆ ಎನ್ನಲಾಗಿದೆ. ಮಣಿಪಾಲದ ಖಾಸಗಿ ಸಂಸ್ಥೆಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡಿದ್ದ ಚೆಲುವಿ, ಅವರ ಇಬ್ಬರು ಮಕ್ಕಳು ಮತ್ತು ತಾಯಿ ಮನೆಯಲ್ಲಿ […]

ಹಿಂ.ಜಾ.ವೇ ಮತ್ತು ಶ್ರೀ ಶನೇಶ್ವರ ಸೇವಾ ಸಮಿತಿ ವತಿಯಿಂದ ಧಾರ್ಮಿಕ ಕಾರ್ಯಕ್ರಮ

ಹಿರಿಯಡ್ಕ: ಹಿಂದು ಜಾಗರಣ ವೇದಿಕೆ ಹಿರಿಯಡ್ಕ ವಲಯ ಮತ್ತು ಶ್ರೀ ಶನೇಶ್ವರ ಸೇವಾ ಸಮಿತಿ ಹಿರಿಯಡ್ಕ ಇವರ ವತಿಯಿಂದ ಹಿಂದೂ ಧಾರ್ಮಿಕ ಕಾರ್ಯಕ್ರಮ ಏಪ್ರಿಲ್ 30 ರಂದು ಶನಿವಾರ ಹಿರಿಯಡ್ಕ ಶ್ರೀ ಕ್ಷೇತ್ರ ವೀರಭದ್ರ ದೇವಸ್ಥಾನದ ಮುಂಬಾಗದಲ್ಲಿ ನಡೆಯಲಿದೆ. ಶ್ರೀ ಶ್ರೀ ಶ್ರೀ ಈಶಪ್ರೀಯ ತೀರ್ಥ ಸ್ವಾಮೀಜಿ ಅದಮಾರು ಮಠ, ಇವರ ದಿವ್ಯ ಉಪಸ್ಥಿತಿಯಲ್ಲಿ ನವಗ್ರಹ ಪೂರ್ವಕ ಶ್ರೀ ಶನಿಶಾಂತಿ ಮಹಾಯಾಗ ನಡೆಯಲಿದೆ. ಬೆಳಗ್ಗೆ 7.30 ಕ್ಕೆ ಗಣಹೋಮ, 8.00 ಕ್ಕೆ ಶನೇಶ್ವರ ಯಾಗ ಪ್ರಾರಂಭ, 11.00 ಗಂಟೆಗೆ […]

ಲಯನ್ಸ್ ಕ್ಲಬ್ ಹಿರಿಯಡ್ಕ ಪ್ರಾಂತೀಯ ಅಧ್ಯಕ್ಷ, ಮೊದಲ ಮತ್ತು ದ್ವಿತೀಯ ಉಪ ಗವರ್ನರ್ ಗಳ ಭೇಟಿ

  ಉಡುಪಿ: ಆದಿತ್ಯವಾರದಂದು ಲಯನ್ಸ್ ಕ್ಲಬ್ ಹಿರಿಯಡ್ಕದಲ್ಲಿ ಲಯನ್ಸ್ ಪ್ರಾಂತೀಯ ಅಧ್ಯಕ್ಷ ಶಂಕರ್ ಶೆಟ್ಟಿ ಮತ್ತು ಮೊದಲ ಉಪ ಗವರ್ನರ್ ಎಮ್ ಕೆ ಭಟ್ ಮತ್ತು ದ್ವಿತೀಯ ಉಪ ಗವರ್ನರ್ ಡಾ. ನೇರಿ ಕರ್ನಿಲೀಯೋ ಭೇಟಿ ನೀಡಿ ಕ್ಲಬ್ ನ ಕಾರ್ಯ ಚಟುವಟಿಕೆಗಳ ಬಗ್ಗೆ ಹರ್ಷ ವ್ಯಕ್ತ ಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್ ನ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಡ್ದಮ್ ವಹಿಸಿದ್ದರು. ಹಿರಿಯಡ್ಕದ ನಾರಾಯಣಗುರು ಸಭಾಂಗಣದಲ್ಲಿ ಕಾರ್ಯಕ್ರಮವು ಸರಳ ರೀತಿಯಲ್ಲಿ ಜರುಗಿತು. ಸದಸ್ಯರಾದ ವಸಂತ್ ಶೆಟ್ಟಿ ಪ್ರಸಕ್ತ […]