ಇಂದು ಸಿಸ್ ಟೆಕ್ ಕಂಪ್ಯೂಟರ್ ಸ್ಥಳಾಂತರಿತ ಶಾಖೆ ಉದ್ಘಾಟನೆ

ಹಿರಿಯಡಕ: ಕಳೆದ 12 ವರ್ಷಗಳಿಂದ ಹಿರಿಯಡಕದಲ್ಲಿ ಎಲ್ಲಾ ತರದ ಆನ್ಲೈನ್ ಸೇವೆಯನ್ನು ಡಿಜಿಟಲ್ ಸೇವಾ ಕೇಂದ್ರ ಎಸ್.ವೈ.ಎಸ್-ಟೆಕ್ ಕಂಪ್ಯೂ ಟರ್ಸ್ ಎಂಬ ಸಂಸ್ಥೆಯ ಮೂಲಕ ನೀಡುತ್ತಾ ಬಂದಿದ್ದೇವೆ. ಗ್ರಾಹಕರ ಅನುಕೂಲಕ್ಕಾಗಿ ಕಚೇರಿಯು ಧನ್ಯಲಕ್ಷ್ಮಿ ಕಾಂಪ್ಲೆಕ್ಸ್ ನ ನೆಲ ಅಂತಸ್ತಿಗೆ ಇಂದು ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ಸ್ಥಳಾಂತರಗೊಂಡು ಶುಭಾರಂಭಗೊಳ್ಳಲಿದೆ. ಆದುದರಿಂದ ತಾವೆಲ್ಲರೂ ಈ ಒಂದು ಕಾರ್ಯದಲ್ಲಿ ಭಾಗವಹಿಸಿ ಈ ಹಿಂದಿನಂತೆ ನಿರಂತರ ಪ್ರೋತ್ಸಾಹ ನೀಡಿ ಶುಭ ಹಾರೈಸಬೇಕಾಗಿ ಸಂಸ್ಥೆಯ ಮಾಲಕ ರವಿ ಎಸ್ ಹಿರಿಯಡ್ಕ ತಿಳಿಸಿದ್ದಾರೆ.

ಹದಗೆಟ್ಟ ಹಿರಿಯಡಕ- ಗುಡ್ಡೆಯಂಗಡಿ ರಸ್ತೆ: ವಾಹನ ಸವಾರರಿಗೆ ಯಮಕೂಪದ ದರ್ಶನ

ಹಿರಿಯಡಕ: ಉಡುಪಿ ತಾಲೂಕಿನ ಹಿರಿಯಡಕ- ಗುಡ್ಡೆಯಂಗಡಿ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಈ ದಾರಿಯಲ್ಲಿ ಸಾಗುವಾಗ ಯಮಕೂಪದ ದರ್ಶನವಾಗುತ್ತಿದ್ದು, ವಾಹನ ಸವಾರರು ಜೀವವನ್ನು ಅಂಗೈಯಲ್ಲಿಟ್ಟು ಪ್ರಯಾಣಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಹಿರಿಯಡಕದಿಂದ ಗುಡ್ಡೆಯಂಗಡಿ ಸಂಪರ್ಕಿಸುವ ರಸ್ತೆಯಲ್ಲಿ ಐದಾರು ಕಿಲೋಮೀಟರ್‌ ವರೆಗೆ ಗುಂಡಿಗಳು ಬಾಯ್ತೆರೆದುಕೊಂಡಿದ್ದು,  ಅಪಾಯಕ್ಕೆ ಆಹ್ವಾನಿಸುವಂತಿದೆ. ಹಿರಿಯಡಕ ಕೋಟ್ನಕಟ್ಟೆ ಫ್ರೆಂಡ್ಸ್‌ ಸರ್ಕಲ್‌ನಿಂದ ಆರಂಭಗೊಂಡು ಗುಡ್ಡೆಯಂಗಡಿವರೆಗೆ ರಸ್ತೆಯು ತೀರ ದುಃಸ್ಥಿತಿಯಲ್ಲಿದ್ದು, ವಾಹನಗಳ ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿಯಲ್ಲಿದೆ. ಈ ದಾರಿಯಲ್ಲಿ ನಿತ್ಯ ಪ್ರಯಾಣಿಸುವ ವಾಹನ ಸವಾರರು ಮತ್ತು ಸಾರ್ವಜನಿಕರು ಸರ್ಕಾರದ ವಿರುದ್ಧ ಹಿಡಿಶಾಪ […]

ಹಿರಿಯಡ್ಕ: ಎಂಕುಲ್ ಫ್ರೆಂಡ್ಸ್ ಕಲಾವಿದರ ವತಿಯಿಂದ ಆಗಸ್ಟ್ 15 ರಂದು ಇಂಡಿಪೆಂಡೆನ್ಸ್ ಟ್ರೋಫಿ ವಾಲಿಬಾಲ್ ಪಂದ್ಯಾಕೂಟ

ಹಿರಿಯಡ್ಕ: 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಎಂಕುಲ್ ಫ್ರೆಂಡ್ಸ್ ಕಲಾವಿದರ ವತಿಯಿಂದ ಅಂಡರ್- 19 ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಮಟ್ಟದ ವಾಲಿಬಾಲ್ ಪಂದ್ಯಾಕೂಟ ಇಂಡಿಪೆಂಡೆನ್ಸ್ ಟ್ರೋಫಿ- 2022 ಯು ಆಗಸ್ಟ್ 15 ರಂದು ಬೆಳಿಗ್ಗೆ 9:00 ಗಂಟೆಗೆ ಹಿರಿಯಡ್ಕದ ಕೋಟ್ನಕಟ್ಟೆ ಮೈದಾನದಲ್ಲಿ ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮ ಉದ್ಘಾಟನೆ: ದೇವದಾಸ ಮರಾಠೆ ಅಧ್ಯಕ್ಷರು, ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್ ಉಪಸ್ಥಿತಿ: ಶಿವಕುಮಾರ್ ಕರ್ಜೆ ಸ್ಥಾಪಕರು, ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ, ದೇವಾಕರ್ ಭಂಡಾರಿ ಕಾರ್ಯದರ್ಶಿ,ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್ , […]

ಹಿರಿಯಡ್ಕ: ಆಗಸ್ಟ್ 13 ರಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮ

ಹಿರಿಯಡ್ಕ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವವು ಕರ್ನಾಟಕ ಸರ್ಕಾರ ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ಆಗಸ್ಟ್ 13 ಶನಿವಾರದಂದು ಬೆಳಿಗ್ಗೆ 10.30 ಗಂಟೆಗೆ ಕಾಲೇಜಿನ ಪ್ರಾಂಗಣದಲ್ಲಿ ನಡೆಯಲಿದ್ದು, ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್., ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ನಾಯಕ್, ಉಪಾಧ್ಯಕ್ಷೆ ಬೊಮ್ಮರಬೆಟ್ಟು ಶ್ರೀಮತಿ ಲತಾ ಸುರೇಶ್, ಬೊಮ್ಮರಬೆಟ್ಟು ಕುದಿ ವಸಂತ ಶೆಟ್ಟಿ, ಸುರೇಶ್ ನಾಯಕ್ ಉಪಸ್ಥಿತರಿರಲಿದ್ದಾರೆ. ಶ್ರೀಮತಿ ಸುಜಯಾ ಕೆ.ಎಸ್. […]

ಹಿರಿಯಡ್ಕ: ಜುಲೈ 17 ರಂದು ಲಯನ್ಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಹಿರಿಯಡ್ಕ: ಜುಲೈ 17 ಭಾನುವಾರದಂದು ಸಂಜೆ 7-00 ಗಂಟೆಗೆ ಲಯನ್ಸ್ ಕ್ಲಬ್ ಹಿರಿಯಡ್ಕದ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಹಿರಿಯಡ್ಕ ಪೊಲೀಸ್ ಸ್ಟೇಷನ್ ಎದುರು ಬ್ರಹ್ಮಶ್ರೀ ನಾರಾಯಣಗುರು ಸಭಾಂಗಣದ ರಜತರಶ್ಮಿ ಆಡಿಟೋರಿಯಂನಲ್ಲಿ ಜರುಗಲಿದೆ. ಲಯನ್ಸ್ ಕ್ಲಬ್ ಅಧ್ಯಕ್ಷ ಲ. ಎ ರವೀಂದ್ರನಾಥ್ ಹೆಗ್ಡೆ, ಲಯನ್ಸ್ ಕ್ಲಬ್ ಹರ್ಷ ಅಧ್ಯಕ್ಷೆ ಲ. ದೀಪ್ತಿ ಎನ್ ಶೆಟ್ಟಿ, ಪದಗ್ರಹಣಾಧಿಕಾರಿ ಡಾ. ನೇರಿ ಕಾರ್ನೆಲಿಯೋ ಹಾಗೂ ನಿಕಟಪೂರ್ವ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಖಜಾಂಜಿಗಳು ಉಪಸ್ಥಿತರಿರಲಿದ್ದಾರೆ.