ನಮ್ಮ ಕೈಯ್ಯಲ್ಲೇನು ಇಲ್ಲ, ನನ್ನ ಮಗ ಮರಳಿ ಮನೆಗೆ ಬರುವಂತೆ ಮಾಡಿ: ಹರೀಶ್ ಬಂಗೇರ ತಾಯಿ ಕಣ್ಣಿರು

ಕುಂದಾಪುರ: ಕಳೆದ ವರ್ಷ ಮನೆಗೆ ಬಂದಿದ್ದ….ನನ್ನ ಮಗ ನಿರಪರಾಧಿ….ಎಲ್ಲಾ ಒಟ್ಟಾಗಿ ಸಹಾಯ ಮಾಡಿ…ನನ್ನ ಮಗ ವಾಪಾಸ್ ಮನೆಗೆ ಬರುವಂತೆ ಮಾಡಿ…..ಹೀಗೆ ಆ ಹಿರಿಯ ಜೀವ ಕೈಮುಗಿದು ಬೇಡಿಕೊಳ್ಳುತ್ತಿರುವುದು ಒಂದೆಡೆಯಾದರೆ ಪುಟ್ಟ ಕಂದಮ್ಮನನ್ನು ಎತ್ತುಕೊಂಡು ಕಣ್ಣಲ್ಲಿ ನೀರು ಹಾಕುತ್ತಾ ನನ್ನ ಪತಿಯದ್ದೇನು ತಪ್ಪಿಲ್ಲ ಎಂದು ಹೇಳುವ ಹೆಣ್ಮಗಳು ಮತ್ತೊಂದೆಡೆ. ಸೌದಿ ರಾಜಕುಮಾರ ಹಾಗೂ ಮೆಕ್ಕಾದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದಲ್ಲಿ ಸೌದಿ ಪೊಲೀಸರಿಂದ ಬಂಧಿಯಾದ ಹರೀಶ್ ಬಂಗೇರ ಕುಟುಂಬ ಇದೀಗಾ ತಮ್ಮ ನಿರಪರಾಧಿ ಮಗನನ್ನು ವಾಪಾಸ್ ಕರೆದುತನ್ನಿ […]