ದೇಶದ ಅಭಿವೃದ್ದಿಗಾಗಿ ಶ್ರಮಿಸುತ್ತಿರುವ ಸಮಸ್ತ ಇಂಜಿನಿಯರ್ ಗಳಿಗೆ ಇಂಜಿನಿಯರಿಂಗ್ ದಿನದ ಶುಭಾಶಯಗಳು

ಭೋರ್ಗರೆಯುತ್ತಾ ಧುಮ್ಮಿಕ್ಕುವ ಜೋಗದ ಜಲಪಾತವನ್ನು ಕಂಡು ಒಬ್ಬ ಭಾವಾತುರನಾಗಿ ಕಾವ್ಯ ರಚಿಸಿ ಧನ್ಯನಾಗುತ್ತಾನೆ. ಅದೆ ಮತ್ತೊಬ್ಬ ಇಷ್ಟೊಂದು ನೀರು ಪೋಲಾಗುತ್ತಿದೆಯಲ್ಲಾ? ಇದಕ್ಕೆ ಅಣೆಕಟ್ಟು ಕಟ್ಟಿ ವಿದ್ಯುತ್ ಉತ್ಪಾದಿಸಬಹುದಲ್ಲಾ ಅಥವಾ ನೀರಾವರಿಗೆ ಬಳಸಬಹುದಲ್ಲಾ ಎಂದು ಯೋಚಿಸುತ್ತಾನೆ. ಒಬ್ಬ ಕವಿಗೂ ಒಬ್ಬ ವಿಜ್ಞಾನಿಗೂ ಇರುವ ವ್ಯತ್ಯಾಸವೆಂದರೆ ಇದುವೆ. ಇಬ್ಬರೂ ಅವರವರ ಕ್ಷೇತ್ರದಲ್ಲಿ ಶ್ರೇಷ್ಠರು. ಆಧುನಿಕ ಮೈಸೂರಿನ ಶಿಲ್ಪಿ ಸರ್ ಎಮ್ ವಿಶ್ವೇಶ್ವರಯ್ಯನವರ ಜನ್ಮದಿನವನ್ನು ದೇಶಾದ್ಯಂತ ಇಂಜಿನಿಯರರ ದಿನಾಚರಣೆಯಾಗಿ ಆಚರಿಸುತ್ತೇವೆ. ವಿಶ್ವೇಶ್ವರಯ್ಯನವರು ಕೇವಲ ಒಬ್ಬ ಶ್ರೇಷ್ಠ ಇಂಜಿನಿಯರ್ ಮಾತ್ರವಲ್ಲ, ಅವರು ವಿಜ್ಞಾನಿ […]