ದುಃಖ ದುಮ್ಮಾನಗಳನ್ನು ಕಳೆದು ಸಂತಸ ನೆಮ್ಮದಿ ನೀಡುವ ವೆಲಂಕಣಿ ಮಾತೆಯ ಮಂದಿರಕೆ ಸುವರ್ಣೋತ್ಸವದ ಸಂಭ್ರಮ

ಪ್ರಾಕ್ತನ ಕಾಲದಿಂದಲೂ ಕರ್ನಾಟಕ ಕರಾವಳಿಯ ಪ್ರಮುಖ ನಗರಗಳು ಬಂದರು ಪ್ರದೇಶಗಳಾಗಿದ್ದವು. ಮಂಗಳಾಪುರ, ಉದಯಪುರ, ಬಾರಕಾಪುರ ಇವೆಲ್ಲವೂ ದೇಶ ಮತ್ತು ವಿದೇಶಗಳ ಜೊತೆ ನಾವಿಕ ಸಂಬಂಧ ಹೊಂದಿದ್ದ ಸುಪ್ರಸಿದ್ದ ಬಂದರು ನಗರಗಳು. ಆಧುನಿಕ ಉಡುಪಿಯ ಮಲ್ಪೆ ಅತ್ಯಂತ ಪ್ರಮುಖ ಪ್ರದೇಶವಾಗಿದ್ದು, ಇಲ್ಲಿಗೆ ಸಮೀಪದಲ್ಲಿರುವ ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ಚರ್ಚ್ ಬಹು ಪ್ರಸಿದ್ದವಾಗಿದೆ. ಬಂದರು ನಗರಕ್ಕೆ ಸರಿಹೊಂದುವಂತೆ ದೋಣಿಯಾಕಾರದಲ್ಲಿರುವ, ಪಕ್ಕದಲ್ಲೇ ಲೈಟ್ ಹೌಸ್ ರಚನೆಯಂತಹ ಕಟ್ಟಡವೂ ಇರುವ ಶುದ್ದ ಬಿಳಿ ಬಣ್ಣದ ಅತ್ಯಂತ ವಿನೂತನ ಮಾದರಿಯ ಚರ್ಚ್ ಎನಿಸಿಕೊಂಡು ಹಲವಾರು […]