ಕರಾವಳಿಯಲ್ಲಿ ಕಾಡು ಬೆಳೆಸಲು ಜಪಾನ್ ನ “ಮಿಯಾವಾಕಿ ಕಾಡು” ಯೋಜನೆ ಜಾರಿ: ಕಟಪಾಡಿ ಮಹೇಶ ಶೆಣೈ

ಉಡುಪಿ:  ಅವಿಭಜಿತ ಜಿಲ್ಲೆಯ ಪರಿಸರವು ದಿನೇ ದಿನೇ ಕಲುಷಿತಗೊಳ್ಳುತ್ತಿದೆ. ನಾವಿನ್ನು ಎಚ್ಚೆತ್ತದಿದ್ದರೆ ಪರಿಸರದ ಜೊತೆ ನಮಗೂ ಕಷ್ಟಕಾಲ ಬರಲಿದೆ. ಪರಿಸರದಲ್ಲಿರುವ ಶುದ್ಧಗಾಳಿ, ಕುಡಿಯುವ ನೀರು ಮತ್ತು ಜೀವ ವೈವಿಧ್ಯಗಳನ್ನು ಸಂರಕ್ಷಿಸದಿದ್ದರೆ ಮುಂದೆ ಎಣಿಸಲಾಗದ ಘೋರ ಅನಾಹುತ ಸಂಭವಿಸಲಿದೆ. ಜಿಲ್ಲೆಯಲ್ಲಿ ಜಪಾನ್ ದೇಶದ ಮಾದರಿಯಲ್ಲಿ ಮರಗಿಡಗಳನ್ನು ಬೆಳೆಸಿ ಆ ಮೂಲಕ ಪರಿಸರ ರಕ್ಷಣೆಗೆ ಇಲ್ಲಿನ ಸಾಮಾಜಿಕ ಸೇವಾ ಕಾರ್ಯಕರ್ತರು ಧ್ವನಿಯಾಗಲು ನಿರ್ಧರಿಸಿದ್ದಾರೆ ಎಂದು ಸಾವಯುವ ಬದುಕು ತಂಡದ ಸಂಯೋಜಕ ಕಟಪಾಡಿ ಮಹೇಶ ಶೆಣೈ ಹೇಳಿದ್ದಾರೆ. ಅವರು ಬುಧವಾರ ಉಡುಪಿ ಪ್ರೆಸ್ ಕ್ಲಬ್‌ನಲ್ಲಿ […]