ಕೊರೊನಾ ಕೊರೊನಾ ಅಂತ ಹೆದರಿಸುವುದನ್ನು ಮೊದಲು ಬಿಡಿ, ಮನಸ್ಸು ಗಟ್ಟಿಯಾಗಿಸುವ ಕೆಲಸ ಮಾಡಿ : ಡಾ.ಶಶಿಕಿರಣ್ ಶೆಟ್ಟಿ ಹೇಳಿದ್ದಾರೆ ಒಂದಷ್ಟು ಟಿಪ್ಸ್

♠ ಡಾ.ಶಶಿಕಿರಣ್ ಶೆಟ್ಟಿ ಉಡುಪಿ  ಘಟನೆ: 1 : ಇದು 2009 ರಲ್ಲಿ ನಡೆದ ಘಟನೆ. ವೈದ್ಯನಾದ ನನ್ನ ಕ್ಲಿನಿಕ್ ಗೆ ರಾತ್ರಿ 7 ಗಂಟೆಗೆ ಯುವಕನೊಬ್ಬ ಗಾಬರಿಯಿಂದ ಬಂದಿದ್ದ, ಆತನೊಂದಿಗೆ 4-5 ಜನರಿದ್ದರು. “ಸರ್ ಹಾವು ಕಚ್ಚಿದೆ” ಎಂದ. ಕಚ್ಚಿದ ಜಾಗ ನೋಡಿದೆ, ಬಲಗೈಯಲ್ಲಿ ಹಲ್ಲುಗಳ ಎರಡು ಚಿಕ್ಕ ಗಾಯಗಳಿದ್ದವು. ಜೊತೆಗಿದ್ದ ಇಬ್ಬರು “ಅದು ಭಯಂಕರ ಸರ್ಪ, ಕೂಡಲೇ ವಿಷವೇರುವುದು” ಹಾಗೆ ಹೀಗೆ ಅಂತ ಕತೆ ಹೇಳುತ್ತಲಿದ್ದರು. ಸಂದೇಹ ಬೇಡ ಎಂದು ಸಮೀಪದ ಆಸ್ಪತ್ರೆಗೆ ಕಳುಹಿಸಿದೆ. […]