ಗರೋಡಿಗಳ ಯಜಮಾನಿಕೆಯನ್ನು ಬೇರೆ ಜನಾಂಗದವರಿಗೆ ಕೊಡುವುದು ಸರಿಯಲ್ಲ

ಉಡುಪಿ: ಗರೋಡಿಗಳಲ್ಲಿ ಬೇರೆ ಜನಾಂಗದವರಿಗೆ ಗೌರವ ಕೊಡಿ. ಆದರೆ ಅವರಿಗೆ ಯಜಮಾನಿಕೆ ಸ್ಥಾನವನ್ನು ಕೊಡುವುದು ಸರಿಯಲ್ಲ ಎಂದು ಹಿರಿಯ ಜಾನಪದ ವಿದ್ವಾಂಸ ಬಾಬುಶಿವ ಪೂಜಾರಿ ಹೇಳಿದರು. ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ವತಿಯಿಂದ ಆದಿಉಡುಪಿಯ ಬೈದಶ್ರೀ ಕಾರ್ಯಾಲಯದಲ್ಲಿ ಬುಧವಾರ ನಡೆದ ಬೈದಶ್ರೀ ಸಾಹಿತ್ಯ ಪ್ರಶಸ್ತಿ ಹಾಗೂ ವಾರ್ಷಿಕ ಶ್ರೇಷ್ಠ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ತುಳು ಜನಾಂಗ, ತುಳು ಆರಾಧನ ಪದ್ಧತಿಗಳನ್ನು ತಮ್ಮದಲ್ಲವೆಂದು ಹೇಳುತ್ತಿದ್ದ ಮೇಲ್ವಗರ್ದವರು, ಇಂದು ಅವುಗಳು ತಮ್ಮದೆಂದು ವಾದಿಸುತ್ತಿದ್ದಾರೆ. ಅವರಿಗೆ […]