ಕಾರ್ಕಳದ ಉಪನ್ಯಾಸಕ, ಸಾಹಿತಿ ಡಾ.ಸುರೇಶ ಮರಿಣಾಪುರ ಇನ್ನಿಲ್ಲ

ಕಾರ್ಕಳ: ಸಾಹಿತಿ, ಉಪನ್ಯಾಸಕ, ತುಳುನಾಡಿನ ಜಾನಪದ ಮತ್ತು ದೈವಾರಾಧನೆಯ ಬಗ್ಗೆ ಆಳವಾದ ಪಾಂಡಿತ್ಯ ಹೊಂದಿದ್ದ ಕಾರ್ಕಳದ ಡಾ. ಮರಿಣಾಪುರ ಸುರೇಶ(ಮಸುಮಾ)(47)ಅವರು ಗುರುವಾರ ಅಸೌಖ್ಯದಿಂದ ನಿಧನ ಹೊಂದಿದ್ದಾರೆ. ಅವರು ಕೆಲವು ತಿಂಗಳಿಂದ  ಅನಾರೋಗ್ಯಕ್ಕೊಳಗಾಗಿದ್ದರು. ಉಡುಪಿ ಜಿಲ್ಲೆಯ ಹೆಬ್ರಿ, ಕಾರ್ಕಳದ ಎಂಪಿಎಂ ಕಾಲೇಜಿನಲ್ಲಿ, ಮೂಲ್ಕಿಯ ವಿಜಯ ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ೧೫ ಕ್ಕೂ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ನೇರ ನಡೆ ನುಡಿಯವರಾದ ಇವರು ಕಾದಂಬರಿ, ಕವನ ಸಂಕಲನ, ಕತಾ ಸಂಕಲನ ಸೇರಿದಂತೆ ಹಲವು […]